TOP NEWS
tragedy temple pillar collapses 5 lost life 18 injured

Tragedy: ಮಹಾರಾಷ್ಟ್ರದಲ್ಲಿ ಕರುಣಾಜನಕ ಘಟನೆ: ಪ್ರಾರ್ಥನೆಯಲ್ಲಿದ್ದ ಭಕ್ತರ ಮೇಲೆ ಬಿದ್ದ ದೇವಸ್ಥಾನದ ಗೋಪುರ, ಇಬ್ಬರ ಸಾವು

ಮುಂಬೈ: ದೇವಸ್ಥಾನದಲ್ಲಿ ಹನುಮಂತನ ದರ್ಶನ ಪಡೆದು ಭಜನೆಯಲ್ಲಿ ಮುಳುಗಿದ್ದ ಭಕ್ತರ ಮೇಲೆ ನಿರ್ಮಾಣ ಹಂತದ ಸಭಾಂಗಣದ ಪಿಲ್ಲರ್ ಹಾಗೂ ಕಾಂಕ್ರೀಟ್ ಮೇಲ್ಛಾವಣಿ ಕುಸಿದು (Tragedy) ಬಿದ್ದಿರುವ ದಾರುಣ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಜರುಗಿದೆ. ಈ ಅಪಘಾತದಲ್ಲಿಐವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದು, ಮತ್ತೂ ಐವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವಶೇಷಗಳ ರಾಶಿಯ ಕೆಳಗೆ ಸುಮಾರು 50ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆ ಇದ್ದು, ಸದ್ಯ ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಏನಿದು ಪ್ರಕರಣ? ಪರ್ಭಾನಿಯ ಮಾನ್ವತ್…

Read More
ctor darshan devil film will release on OTT zee 5

Actor Darshan: ಒಟಿಟಿ ಹಾಗೂ ಟಿವಿಗೆ ಬರಲು ರೆಡಿಯಾಯ್ತು ‘ಡೆವಿಲ್’ ಚಿತ್ರ, ಖುಷಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ (Actor Darshan) ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಕಾನೂನು ಪ್ರಕ್ರಿಯೆಗಳ ಪ್ರಕಾರ ದರ್ಶನ್ ಸದ್ಯಕ್ಕಂತೂ ಹೊರಬರುವ ಸಾಧ್ಯತೆಗಳಿಲ್ಲ ಹಾಗೂ ಕನಿಷ್ಠ ಮತ್ತೊಂದು ವರ್ಷ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ನಿರಾಶಾದಾಯಕ ಸನ್ನಿವೇಶದ ನಡುವೆಯೇ, ದರ್ಶನ್ ನಟನೆಯ ಕೊನೆಯ ಆ್ಯಕ್ಷನ್ ಸಿನಿಮಾವಾದ ‘ಡೆವಿಲ್’ ಕೊನೆಗೂ ಒಟಿಟಿ ಪ್ಲಾಟ್‌ಫಾರ್ಮ್ ಹಾಗೂ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಜೀ5 ನಲ್ಲಿ…

Read More
NEET student case NTA says candidate selected Abu Dhabi as exam center

NEET: ನಾಗಪುರ ವಿದ್ಯಾರ್ಥಿಗೆ ದುಬೈ ಕೇಂದ್ರ ಹಂಚಿಕೆ! ಸೈಬರ್ ತನಿಖೆಗೆ ಮುಂದಾದ ಎನ್‌ಟಿಎ

ಬೆಂಗಳೂರು: ದೇಶಾದ್ಯಂತ ಜೂನ್ 21ರ ಭಾನುವಾರ ನಡೆಯಲಿರುವ ‘ನೀಟ್ ಯುಜಿ 2026’ (NEET) ಮರುಪರೀಕ್ಷೆಯ ಸಿದ್ಧತೆಗಳ ನಡುವೆಯೇ ಭಾರಿ ವಿವಾದವೊಂದು ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರದ ನಾಗಪುರ ಮೂಲದ ವಿದ್ಯಾರ್ಥಿಯೊಬ್ಬನಿಗೆ ಭಾರತದ ಬದಲು ಯುಎಇಯ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿದ್ದು, ಇದು ಪೋಷಕರು ಹಾಗೂ ರಾಜಕೀಯ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಈ ಲೋಪವನ್ನು ಕಡscaleವಾಗಿ ಟೀಕಿಸಿದ್ದು, ದೇಶದ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ….

Read More
dk shivakumar slams opposition leaders regarding Bidadi township

DK Shivakumar: ಕುಮಾರಸ್ವಾಮಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ: ‘ಭೂಮಿ ನೋಟಿಫೈ ಮಾಡಿದ್ದೇ ಜೆಡಿಎಸ್, ಈಗ ನಾಟಕ ಆಡುತ್ತಿದ್ದಾರೆ’

ಬೆಂಗಳೂರು: ಬಿಡದಿ ಭಾಗದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ನಡೆಯುತ್ತಿರುವ ಜಮೀನು ಸ್ವಾಧೀನ ಪ್ರಕ್ರಿಯೆ ಹಾಗೂ ಇದರ ವಿರುದ್ಧ ಜೆಡಿಎಸ್ ಹಮ್ಮಿಕೊಂಡಿರುವ ಹೋರಾಟದ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ಕಡಕ್ ಕೌಂಟರ್ ನೀಡಿರುವ ಸಿಎಂ, ವಿರೋಧ ಪಕ್ಷಗಳು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಇಡೀ ವಿಷಯವನ್ನು ವಿವಾದ ಮಾಡುತ್ತಿವೆ ಎಂದು ಜರೆದಿದ್ದಾರೆ. ಕುಮಾರಸ್ವಾಮಿ ಆಧಾರ ರಹಿತ ಆರೋಪ ಬಿಡದಿ ಜಮೀನು ವಿಚಾರದಲ್ಲಿ ಕುಮಾರಸ್ವಾಮಿ…

Read More
cm dk shivakumar gave green signal to start safari

Bus Fare: ಬಸ್‌ ದರ ಏರಿಕೆಗೆ ಸಾರಿಗೆ ನಿಗಮ ಪ್ರಸ್ತಾವನೆ, ಸಿಎಂ ಹೇಳಿದ್ದೇನು?

ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಸಾರಿಗೆ ವೆಚ್ಚದ ಭಾರಿ ಆಘಾತ (Bus Fare) ಎದುರಾಗಿದೆ. ಒಂದು ಕಡೆ ರಾಜ್ಯದ ಸರ್ಕಾರಿ ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದರೆ, ಇನ್ನೊಂದೆಡೆ ಖಾಸಗಿ ಬಸ್ ಮಾಲೀಕರ ಒಕ್ಕೂಟವು ಈಗಾಗಲೇ ಪ್ರಯಾಣ ದರವನ್ನು ಅಧಿಕೃತವಾಗಿ ಹೆಚ್ಚಿಸಿ ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಡಿಸೇಲ್‌ ದರ ಏರಿಕೆ ಕಾರಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

Read More
dk shivakumar cabinet allowed 15 days to get permanent electricity

DK Shivakumar: ಹಳೆಯ ಕಟ್ಟಡಗಳ ಮಾಲೀಕರಿಗೆ ಶಾಶ್ವತ ವಿದ್ಯುತ್ ಸೌಲಭ್ಯ

ಬೆಂಗಳೂರು: ದಶಕಗಳಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕದ ಮೇಲೆಯೇ ಅವಲಂಬಿತವಾಗಿದ್ದ ಹಳೆಯ ಕಟ್ಟಡಗಳ ಮಾಲೀಕರಿಗೆ ನಿರಾಳತೆ ನೀಡುವಂತಹ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ಸಚಿವ ಸಂಪುಟ ಕೈಗೊಂಡಿದೆ. ಇಂತಹ ಕಟ್ಟಡಗಳಿಗೆ ನಿಯಮಾನುಸಾರ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಕೊನೆಯದಾಗಿ 15 ದಿನಗಳ ವಿಶೇಷ ಗಡುವನ್ನು ನೀಡಿದೆ. ಯಾರಿಗೆಲ್ಲಾ ಅವಕಾಶ ನೀಡಲಾಗಿದೆ? ಈ ಸೌಲಭ್ಯವನ್ನು ಪಡೆದುಕೊಳ್ಳಲು ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. 2000ನೇ ಇಸವಿಯ ಮೇ 31ಕ್ಕೂ ಮುನ್ನ ನಿರ್ಮಾಣಗೊಂಡು, ಪ್ರಸ್ತುತ…

Read More
Good News new Karnataka bhavan to construct in new delhi for UPSC and IAS students

Good News: ದೆಹಲಿಯಲ್ಲಿ ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಹೊಸ ಆಸರೆ: ₹80 ಕೋಟಿ ವೆಚ್ಚದ ‘ಕರ್ನಾಟಕ ಭವನ-4’ ಕ್ಕೆ ಕ್ಯಾಬಿನೆಟ್ ಅಸ್ತು

ಬೆಂಗಳೂರು: ದೇಶದ ರಾಜಧಾನಿ ದೆಹಲಿಗೆ ತೆರಳಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯುವ ರಾಜ್ಯದ ಪ್ರತಿಭಾವಂತ ಯುವಜನತೆಗೆ ಸರ್ಕಾರ ಸಿಹಿ ಸುದ್ದಿ (Good News) ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವದೆಹಲಿಯಲ್ಲಿ ಹೊಸದಾಗಿ ‘ಕರ್ನಾಟಕ ಭವನ-4’ ಕಟ್ಟಡವನ್ನು ನಿರ್ಮಿಸಲು ಹಸಿರು ನಿಶಾನೆ ನೀಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರದ ನಿರ್ಧಾರ ಐಎಎಸ್ ಮತ್ತು ಐಪಿಎಸ್‌ನಂತಹ ಉನ್ನತ ಹುದ್ದೆಗಳ ಕನಸು ಹೊತ್ತು ದೆಹಲಿಯಲ್ಲಿ ಬೀಡುಬಿಡುವ ಕರ್ನಾಟಕದ…

Read More