TOP NEWS
megastar chiranjeevi praises shivarajkumar acting in peddi film

Sandalwood: ಶಿವಣ್ಣ ಚಿತ್ರದಲ್ಲಿದ್ದದ್ದೇ ನಮಗೆ ಪ್ಲಸ್ ಪಾಯಿಂಟ್: ಪೆದ್ದಿ ಸಿನಿಮಾದ ಹ್ಯಾಟ್ರಿಕ್ ಹೀರೊ ನಟನೆಯನ್ನು ಕೊಂಡಾಡಿದ ಚಿರಂಜೀವಿ!

ಬೆಂಗಳೂರು: ಕನ್ನಡ ಚಿತ್ರರಂಗದ ದೊಡ್ಮನೆಯ ಹೆಮ್ಮೆಯ ನಟ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ (Sandalwood) ಅವರಿಗೆ ಸ್ಯಾಂಡಲ್‌ವುಡ್ ದಾಟಿ ಇಡೀ ಸೌತ್ ಸಿನಿಮಾರಂಗದಲ್ಲೂ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಕೇವಲ ನಟನೆಯಷ್ಟೇ ಅಲ್ಲದೆ, ತಮ್ಮ ಮೇರು ವ್ಯಕ್ತಿತ್ವದಿಂದಲೇ ಪರಭಾಷೆಯ ಚಿತ್ರರಂಗಗಳ ಪ್ರೀತಿ ಸಂಪಾದಿಸಿರುವ ಶಿವಣ್ಣ ಅವರಿಗೆ ತೆಲುಗು ಹಾಗೂ ತಮಿಳಿನಿಂದ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ ರಾಮ್ ಚರಣ್ ಪ್ರಮುಖ ಭೂಮಿಕೆಯಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪೆದ್ದಿ’ ಸಿನಿಮಾದಲ್ಲಿ…

Read More
teacher who assault students parents hit them in Belagavi

Assault: ಚಿಕ್ಕೋಡಿಯಲ್ಲಿ ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಪೋಷಕರಿಂದ ಕಾಮುಕನಿಗೆ ಸಾರ್ವಜನಿಕವಾಗಿ ಧರ್ಮದೇಟು!

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ತಲ್ಲಣ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಹತ್ತನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕವಾಗಿ (Assault) ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನಿಗೆ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಹಿಡಿದು ಶಾಲಾ ಆವರಣದಲ್ಲೇ ಚೆನ್ನಾಗಿ ಥಳಿಸಿ ಸಾರ್ವಜನಿಕವಾಗಿ ಧರ್ಮದೇಟು ನೀಡಿರುವ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಶ್ರೀಶೈಲ್ ಕುಂಬಾರ ಎಂಬಾತನೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಕಿರಾತಕ. ಪಾಸ್ ಮಾಡುವ ಆಮಿಷ…

Read More
krishna byre gowda takes class to GBA officers regarding roads

Krishna Byre Gowda: ಹೈಕಮಾಂಡ್ ಸಂಧಾನಕ್ಕೆ ಒಲಿದ ಕೃಷ್ಣ ಬೈರೇಗೌಡ: ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ಸ್ವೀಕರಿಸಿದ ದಿನವೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್!

ಬೆಂಗಳೂರು: ಖಾತೆ ಹಂಚಿಕೆಯಲ್ಲಿ ತಮಗಾಗಿದ್ದ ಅಸಮಾಧಾನವನ್ನು ಬದಿಗಿಟ್ಟು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಕೊನೆಗೂ ತಮ್ಮ ಇಲಾಖೆಯ ಅಧಿಕಾರ ಸೂತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನಡೆಸಿದ ಸರಣಿ ಸಂಧಾನ ಸಫಲವಾದ ಬೆನ್ನಲ್ಲೇ, ಜೂನ್ 16ರಂದು ಸಚಿವರು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪ್ರಮುಖ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಆಡಳಿತ ಆರಂಭಿಸಿದರು. ಇಲಾಖೆಯ ಚುಕ್ಕಾಣಿ ಹಿಡಿದ ಮೊದಲ…

Read More
Congress CPL meeting dk shivakumar meets siddaramaiah

Congress: ಪರಿಷತ್ ಚುನಾವಣೆ ತಲ್ಲಣ: ಸಿಎಲ್‌ಪಿ ಸಭೆಗೂ ಮುನ್ನ ಸಿದ್ದರಾಮಯ್ಯ ನಿವಾಸಕ್ಕೆ ಸಿಎಂ ಡಿಕೆಶಿ ದಿಢೀರ್ ಭೇಟಿ, ರಹಸ್ಯ ಸಮಾಲೋಚನೆ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ರೋಮಾಂಚನ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಯ ಮುಹೂರ್ತ ಹತ್ತಿರವಾಗುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್ (Congress) ಪಾಳಯದಲ್ಲಿ ತಂತ್ರ-ಪ್ರತಿತಂತ್ರಗಳ ಜಿದ್ದಾಜಿದ್ದಿ ತಾರಕಕ್ಕೇರಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಿರ್ಣಾಯಕ ಸಭೆ ಆರಂಭವಾಗುವ ಕೆಲವೇ ಗಂಟೆಗಳ ಮುಂಚೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ‘ಕಾವೇರಿ’ಗೆ ಸರ್ಪ್ರೈಸ್ ಭೇಟಿ ನೀಡಿರುವುದು ಭಾರಿ ರಾಜಕೀಯ ಸಂಚಲನ ಮೂಡಿಸಿದೆ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ನಡೆದಿರುವ ಈ ಆಂತರಿಕ ಮಾತುಕತೆ…

Read More
Siddaramaiahs ahinda team facing big problem

Siddaramaiah: ಸಿದ್ದರಾಮಯ್ಯ ಅವರ ‘ಅಹಿಂದ’ ಭದ್ರಕೋಟೆಗೆ ಬಿರುಕು: ಮೂಲ ಕಾಂಗ್ರೆಸ್ಸಿಗರ ಪ್ರಾಬಲ್ಯಕ್ಕೆ ನಾಯಕರು ಕಂಗಾಲು!

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಶಕಗಳ ಕಾಲ ಬೆನ್ನೆಲುಬಾಗಿ ನಿಂತಿದ್ದ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಒಕ್ಕೂಟದಲ್ಲಿ ಇದೀಗ ಭಾರಿ ಬಿರುಕು ಕಾಣಿಸಿಕೊಂಡಿದೆ. ಸಿದ್ದರಾಮಯ್ಯ (Siddaramaiah) ಅವರ ಬಣದಲ್ಲೇ ಗುರುತಿಸಿಕೊಂಡು ರಾಜಕೀಯವಾಗಿ ಮುಂಚೂಣಿಯಲ್ಲಿದ್ದ ಪ್ರಮುಖ ಅಹಿಂದ ಮುಖಂಡರು, ಪ್ರಸ್ತುತ ರಾಜಕಾರಣದಲ್ಲಿ ತಮಗೆ ಸೂಕ್ತ ಮನ್ನಣೆ ಹಾಗೂ ಅಧಿಕಾರದ ಸ್ಥಾನಮಾನಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದಾರೆ. ಈ ನಾಯಕರು ಸಿದ್ದು ಬಣದಿಂದ ದೂರ ಸರಿಯುತ್ತಿರುವುದು ಮತ್ತು ಪರ್ಯಾಯ ದಾರಿಗಳತ್ತ…

Read More
BJP Leader CT Ravi invites Priyank kharge to RSS branch

CT Ravi: “ಪ್ರಿಯಾಂಕ್ ಖರ್ಗೆ ದ್ವೇಷ ಬಿಟ್ಟು ಸಂಘದ ಶಾಖೆಗೆ ಬರಲಿ”: ನೋಂದಣಿ ವಿವಾದಕ್ಕೆ ಬಿಜೆಪಿ ನಾಯಕ ಸಿ.ಟಿ. ರವಿ ತಿರುಗೇಟು!

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಸ್ತಿತ್ವ ಹಾಗೂ ಆರ್ಥಿಕ ಪಾರದರ್ಶಕತೆಯನ್ನು ಪ್ರಶ್ನಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ವಿಚಾರವಾಗಿ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ (CT Ravi) ಆಕ್ರೋಶ ಹೊರಹಾಕಿದ್ದಾರೆ. ಸಚಿವರಿಗೆ ಆರ್‌ಎಸ್‌ಎಸ್ ಕಾರ್ಯಾಚರಣೆಯ ಬಗ್ಗೆ ನಿಜವಾದ ಕುತೂಹಲವಿದ್ದರೆ, ಪತ್ರ ಬರೆಯುವುದನ್ನು ಬಿಟ್ಟು ನೇರವಾಗಿ ಸಂಘದ ಶಾಖೆಗೆ ಬಂದು ವೀಕ್ಷಿಸಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ದಾಖಲೆಗಳು ಸರ್ಕಾರದ ಬಳಿಯೇ ಇವೆ, ಇಲಾಖೆ ಚೆಕ್ ಮಾಡಲಿ!…

Read More
fake Bomb threat email to bengaluru RTO office

Bomb Threat: ಬೆಂಗಳೂರಿನ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರು: ರಾಜಧಾನಿಯ ಜನನಿಬಿಡ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಮತ್ತೊಮ್ಮೆ ಬಾಂಬ್ ಆತಂಕ ಸೃಷ್ಟಿಸಿದ್ದಾರೆ. ನಗರದ ಹಲವು ಪ್ರಮುಖ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಇ-ಮೇಲ್ ಮೂಲಕ ಸ್ಫೋಟದ (Bomb Threat) ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಗದ್ದಲ ಮೂಡಿಸಿದೆ. ಜ್ಞಾನಭಾರತಿ, ಕಸ್ತೂರಿನಗರ, ಎಚ್.ಎಸ್.ಆರ್ ಲೇಔಟ್ ಹಾಗೂ ತಲಘಟ್ಟಪುರದ ಆರ್‌ಟಿಒ ಕಚೇರಿಗಳಿಗೆ ಜೂನ್ 16ರ ಮಧ್ಯಾಹ್ನ 1:30ರ ಸುಮಾರಿಗೆ ಏಕಕಾಲದಲ್ಲಿ ಈ ವಿಧ್ವಂಸಕ ಇ-ಮೇಲ್‌ಗಳು ಬಂದಿವೆ. ಕಚೇರಿ ಕಟ್ಟಡಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದಾಗಿ ಸಂದೇಶದಲ್ಲಿ…

Read More