TOP NEWS
allu arjun summoned by court regarding pushpa 2 case

Allu Arjun: ‘ಪುಷ್ಪ 2’ ದುರಂತಕ್ಕೆ ಬಿಗ್ ಟ್ವಿಸ್ಟ್: ನಟ ಅಲ್ಲು ಅರ್ಜುನ್‌ಗೆ ಹೈದರಾಬಾದ್ ಕೋರ್ಟ್ ತುರ್ತು ಸಮನ್ಸ್

ಹೈದರಾಬಾದ್: ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ̈ (Allu Arjun) ಅವರಿಗೆ ಹೈದರಾಬಾದ್‌ನ ನ್ಯಾಯಾಲಯವು ಬಿಗ್ ಶಾಕ್ ನೀಡಿದ್ದು, ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 22ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಜೂನ್ 19ರ ಶುಕ್ರವಾರದಂದು ಅಧಿಕೃತ ಸಮನ್ಸ್ ಜಾರಿ ಮಾಡಿದೆ. ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಅಲ್ಲು ಅರ್ಜುನ್ ಸೇರಿದಂತೆ ಪ್ರಕರಣದ ಇತರ 19 ಆರೋಪಿಗಳಿಗೂ ನೋಟಿಸ್ ನೀಡಿದೆ. ಕಳೆದ 2024 ರ ಡಿಸೆಂಬರ್ 4 ರಂದು ಅಲ್ಲು ಅರ್ಜುನ್…

Read More
Tollywood director k raghavendra trolled for his behavior with actress

Tollywood: ಕೀರ್ತಿ ಸುರೇಶ್, ಕೃತಿ ಶೆಟ್ಟಿ ಕೈ ಹಿಡಿದು ಎಳೆದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್: ವಿಡಿಯೋ ವೈರಲ್, ನೆಟ್ಟಿಗರಿಂದ ತೀವ್ರ ಆಕ್ರೋಶ!

ಹೈದರಾಬಾದ್:‌ ತೆಲುಗು ಚಿತ್ರರಂಗದ ದೃಶ್ಯಕಾವ್ಯಗಳ ದಂತಕಥೆ ಎಂದೇ ಹೆಸರಾಗಿರುವ 84 ವರ್ಷದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ವರ್ತನೆ ಈಗ (Tollywood) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಟೀಕೆಗೆ ಈಡಾಗಿದೆ. ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ಅವರ ಮುಂಬರುವ ಹೊಸ ಸಿನಿಮಾದ ಮುಹೂರ್ತ ಸಮಾರಂಭದ ವಿಡಿಯೋವೊಂದು ಗುರುವಾರ ‘ಎಕ್ಸ್’ (ಟ್ವಿಟರ್) ವೇದಿಕೆಯಲ್ಲಿ ವೈರಲ್ ಆಗಿದ್ದು, ಅದರಲ್ಲಿ ರಾಘವೇಂದ್ರ ರಾವ್ ಅವರು ನಟಿಯರಾದ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಅವರ ಕೈಗಳನ್ನು ಹಿಡಿದು…

Read More
crime pune Godman Abused Woman for many years arrested

Crime: ದೇವರೆಂದು ನಂಬಿಸಿ ವಿಕೃತಿ: ಪುಣೆಯಲ್ಲಿ ಮಹಿಳೆಗೆ ಕರೆಂಟ್ ಶಾಕ್ ಕೊಟ್ಟು, ಮೂತ್ರ ಕುಡಿಸಿದ್ದ ನಕಲಿ ಸ್ವಾಮೀಜಿ ಅರೆಸ್ಟ್!

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಆಶೀರ್ವಾದ ಹಾಗೂ ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯೊಬ್ಬರ ಮೇಲೆ ಸುದೀರ್ಘ ಕಾಲ ಭೀಕರ ದೌರ್ಜನ್ಯ ಎಸಗುತ್ತಿದ್ದ ನಕಲಿ ಬಾಬಾನ (Crime) ಅಸಲಿ ಮುಖವಾಡ ಕಳಚಿಬಿದ್ದಿದೆ. ತಾನು ಸಾಕ್ಷಾತ್ ದೇವರ ಅವತಾರ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಎಂಬಾತನನ್ನು ಪುಣೆ ಪೊಲೀಸರು ಕಡೆಗೂ ಬಂಧಿಸಿದ್ದಾರೆ. ಈತ ಹಾಗೂ ಇವನ ಸಹಚರರು ಸೇರಿ ನೊಂದ ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿ, ಎಲೆಕ್ಟ್ರಿಕ್ ಶಾಕ್ ನೀಡಿ ಜೀವರಕ್ಷಕ ಯಾತನೆ ಕೊಟ್ಟಿರುವ ದಿಗಿಲು…

Read More
cyber crime to INOX Group manager lost 10 crore

Cyber Crime: ಐನಾಕ್ಸ್ ಕಂಪನಿಗೆ ‘ಬಾಸ್’ ಹೆಸರಲ್ಲಿ 10.4 ಕೋಟಿ ರೂ. ಸೈಬರ್ ವಂಚನೆ

ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು (Cyber Crime) ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು ಈಗ ಕಾರ್ಪೊರೇಟ್ ವಲಯಕ್ಕೆ ದೊಡ್ಡ ಕನ್ನ ಹಾಕುತ್ತಿದ್ದಾರೆ. ಇದೀಗ ಪ್ರಖ್ಯಾತ ಚಲನಚಿತ್ರ ಮಂದಿರಗಳ ಸಂಸ್ಥೆ ‘ಐನಾಕ್ಸ್ ಗ್ರೂಪ್’ ಇಂತಹದ್ದೇ ಒಂದು ಭೀಕರ ವಂಚನೆಗೆ ಒಳಗಾಗಿದೆ. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರ (ED) ಹೆಸರಿನಲ್ಲಿ ಬಂದ ನಕಲಿ ವಾಟ್ಸಾಪ್ ಸಂದೇಶವನ್ನು ನೈಜ ಎಂದು ನಂಬಿದ ಅಕೌಂಟ್ಸ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ (DGM), ಬರೋಬ್ಬರಿ 10,40,71,924 ರೂಪಾಯಿಗಳನ್ನು (10.4 ಕೋಟಿ ರೂ.) ಹಂತ-ಹಂತವಾಗಿ ವಂಚಕರ ಖಾತೆಗಳಿಗೆ ವರ್ಗಾಯಿಸಿ ಕೈಸುಟ್ಟುಕೊಂಡಿದ್ದಾರೆ….

Read More
actor prakash raj gives clarification regarding his name in dharmasthala case controversy at Bengaluru press club

Dharmasthala Case: “ನನ್ನ ಹೋರಾಟ ಸೌಜನ್ಯ ಸಾವಿನ ನ್ಯಾಯಕ್ಕಾಗಿ, ಕ್ಷೇತ್ರದ ವಿರುದ್ಧವಲ್ಲ”: 200 ಕೋಟಿ ಡೀಲ್ ಆರೋಪಕ್ಕೆ ನಟ ಪ್ರಕಾಶ್ ರಾಜ್ ಗರಂ!

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala Case) ವಿರುದ್ಧದ ಪಿತೂರಿ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್‌ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿ ತಮಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಅಪಾರವಾಗಿ ಗೌರವಿಸುವುದಾಗಿ ಹೇಳಿದ ಅವರು, ತಮ್ಮ ಹೋರಾಟ ಕೇವಲ ಸೌಜನ್ಯ ಸೇರಿದಂತೆ ಅಲ್ಲಿ ನಿಗೂಢವಾಗಿ ಮೃತಪಟ್ಟ ಇತರ…

Read More
Boss film controversy Vijayalakshmi darshan petition to high court

Boss Film: ಚಿತ್ರಮಂದಿರಕ್ಕೆ ಬರುವ ಮುನ್ನವೇ ಹೈಕೋರ್ಟ್ ಮೆಟ್ಟಿಲೇರಿದ ‘ಬಾಸ್’ ವಿವಾದ: ಸಿನಿಮಾ ಪ್ರದರ್ಶನ ನಿಲ್ಲಿಸಲು ದರ್ಶನ್ ಪತ್ನಿ ಸಜ್ಜು

ಬೆಂಗಳೂರು: ಶೂಟಿಂಗ್ ಹಂತದಿಂದಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕಿದ್ದ ವಿ. ಲವ ನಿರ್ದೇಶನದ ‘ಬಾಸ್’ (Boss Film) ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಇದೇ ಜೂನ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದ ಈ ಚಿತ್ರಕ್ಕೆ ತಡೆ ನೀಡುವಂತೆ ಆಗ್ರಹಿಸಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಈಗ ಹೈಕೋರ್ಟ್ ಕದ ತಟ್ಟಿದ್ದಾರೆ. ಕೊನೆ ಕ್ಷಣದ ಈ ಬೆಳವಣಿಗೆಯಿಂದಾಗಿ ಇಡೀ ಚಿತ್ರತಂಡ ಈಗ ಇಕ್ಕಟ್ಟಿಗೆ ಸಿಲುಕಿದೆ….

Read More
karnataka women are objecting applying again for gruhalakshmi

Gruhalakshmi: ಗ್ಯಾರಂಟಿ ಯೋಜನೆಗಳ ದುರುಪಯೋಗಕ್ಕೆ ಸಿಎಂ ಬ್ರೇಕ್: ಗೃಹಲಕ್ಷ್ಮಿ ಧನಸಹಾಯಕ್ಕೆ ಇನ್ಮುಂದೆ ಬಯೋಮೆಟ್ರಿಕ್, ಹೊಸ ಅರ್ಜಿ ಕಡ್ಡಾಯ!

ಬೆಂಗಳೂರು: ಅರ್ಹರಲ್ಲದವರೂ ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಆಡಳಿತ, ‘ಗೃಹಲಕ್ಷ್ಮಿ’ (Gruhalakshmi) ಮತ್ತು ‘ಗೃಹಜ್ಯೋತಿ’ ಯೋಜನೆಗಳಿಗೆ ದೊಡ್ಡ ಮಟ್ಟದ ಸರ್ಜರಿ ಮಾಡಲು ಸಿದ್ಧತೆ ನಡೆಸಿದೆ. ನಕಲಿ ದಾಖಲೆ ಸೃಷ್ಟಿಸಿ ಸೌಲಭ್ಯ ಪಡೆಯುತ್ತಿರುವವರನ್ನು ಪಟ್ಟಿಯಿಂದ ಕೈಬಿಡಲು ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಗೆ ನಿರ್ಧರಿಸಲಾಗಿದ್ದು, ಪ್ರತಿಯೊಬ್ಬರೂ ಹೊಸದಾಗಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. ಆಡಳಿತ ಮಂಡಳಿಯ ಈ ದಿಢೀರ್ ಕ್ರಮಕ್ಕೆ ರಾಜ್ಯದ ಮಹಿಳಾ ವಲಯದಿಂದ ಪರ-ವಿರೋಧದ ದೊಡ್ಡ ಚರ್ಚೆಗಳು ಆರಂಭವಾಗಿವೆ. ಹೊಸ…

Read More