Self Harming: ವಿದೇಶದಿಂದ ಬಂದ ನಾಲ್ಕೇ ದಿನಕ್ಕೆ ಪತಿ ಆತ್ಮಹತ್ಯೆ; ಪತ್ನಿ, ಅತ್ತೆ ವಿರುದ್ಧ ಡೆತ್ನೋಟ್ನಲ್ಲಿ ಗಂಭೀರ ಆರೋಪ
ದಾಂಡೇಲಿ: ಮಲೇಷ್ಯಾದಲ್ಲಿ ಕೆಲಸ ಮುಗಿಸಿ ನಾಲ್ಕು ದಿನಗಳ ಹಿಂದಷ್ಟೇ ತಾಯ್ನಾಡಿಗೆ ಮರಳಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬಾಂಬೆಚಾಳದ ನಿವಾಸಿ ರಾಘವೇಂದ್ರ ವಾಡಕರ ಮೃತಪಟ್ಟವರು. ಸಾವಿಗೂ ಮುನ್ನ ಅವರು ಬರೆದಿಟ್ಟಿರುವ ಡೆತ್ನೋಟ್ನಲ್ಲಿ ಪತ್ನಿ ಮತ್ತು ಅತ್ತೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಾವಿಗೆ ಪತ್ನಿಯ ನಡವಳಿಕೆಯೇ ಕಾರಣ? ಕಳೆದ ಹಲವು ವರ್ಷಗಳಿಂದ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದ ರಾಘವೇಂದ್ರ, ಪತ್ನಿ ಮೇಘಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ…
