TOP NEWS
Cm vijay flags off 300 new buses takes small ride

CM Vijay: ಸಾರಿಗೆ ವ್ಯವಸ್ಥೆಗೆ ಹೈಟೆಕ್ ಸ್ಪರ್ಶ: ತಮಿಳುನಾಡಿನಲ್ಲಿ 300 ಹೊಸ ಬಸ್‌ಗಳ ಲೋಕಾರ್ಪಣೆ ಮಾಡಿದ ಸಿಎಂ ಜೋಸೆಫ್ ವಿಜಯ್!

ಚೆನ್ನೈ: ತಮಿಳುನಾಡು ರಾಜ್ಯ ಸರ್ಕಾರವು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಗೆ ಭಾರಿ ಪ್ರೋತ್ಸಾಹ ನೀಡಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಅವರು ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬಲಪಡಿಸಲು ಸುಮಾರು 127.21 ಕೋಟಿ ರೂಪಾಯಿ ವೆಚ್ಚದ 300 ನೂತನ ಸರ್ಕಾರಿ ಬಸ್‌ಗಳ ಸೇವೆಗೆ ಗುರುವಾರ ಚಾಲನೆ ನೀಡಿದ್ದಾರೆ. ನಗರ ಹಾಗೂ ಉಪನಗರಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಉದ್ಘಾಟನೆಗೊಂಡ ತಕ್ಷಣವೇ ಕೋಯಿಂಬೇಡು ಮತ್ತು ಕಿಲಂಬಾಕ್ಕಂನಂತಹ ಪ್ರಮುಖ ನಿಲ್ದಾಣಗಳಿಂದ…

Read More
tamil nadu udayanidhi stalin taunts vijay over his wife divorce case in assembly

Tamil Nadu: ತಮಿಳುನಾಡು ಅಸೆಂಬ್ಲಿಯಲ್ಲಿ ‘ವಿಜಯ್ ವರ್ಸಸ್ ಉದಯನಿಧಿ’ ಕದನ: ರಾಜಕೀಯ ಜಿದ್ದಾಜಿದ್ದಿಗೆ ಕೌಟುಂಬಿಕ ಕೋರ್ಟ್ ಟ್ವಿಸ್ಟ್

ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭೆಯು ಇದೀಗ ಇಬ್ಬರು ಯುವ ರಾಜಕೀಯ ನಾಯಕರ ತೀರಾ ವೈಯಕ್ತಿಕ ಮಟ್ಟದ ವಾಗ್ದಾಳಿಗೆ ವೇದಿಕೆಯಾಗಿದೆ. ಮುಖ್ಯಮಂತ್ರಿ ವಿಜಯ್ ಹಾಗೂ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನಡುವಿನ ರಾಜಕೀಯ ಸಮರ ಹದ್ದುಮೀರಿದ್ದು, ಪರಸ್ಪರರ ಖಾಸಗಿ ಬದುಕನ್ನು ಅಸೆಂಬ್ಲಿಯಲ್ಲೇ ಕೆದಕುವ ಹಂತಕ್ಕೆ ತಲುಪಿದೆ. ಸದನದಲ್ಲಿ ಸಿಎಂ ವಿಜಯ್ ಮಾಡಿದ ಭಾಷಣಕ್ಕೆ ಕೌಂಟರ್ ಕೊಡುವ ನೆಪದಲ್ಲಿ ಉದಯನಿಧಿ ಅವರು, ವಿಜಯ್ ಅವರ ವೈವಾಹಿಕ ಜೀವನದ ವಿಚ್ಛೇದನ ಪ್ರಕರಣವನ್ನು ಎಳೆದು ತಂದು ಭಾರಿ ಸಂಚಲನ ಮೂಡಿಸಿದ್ದಾರೆ. ವಿಜಯ್…

Read More
tamil nadu cm vijay announces farmers crop loan waiver up to 75000

Tamil Nadu: ಅನ್ನದಾತನ ಮನವಿಗೆ ಸ್ಪಂದಿಸಿದ ವಿಜಯ್ ಸರ್ಕಾರ: 75 ಸಾವಿರಕ್ಕೂ ಮೀರಿದ ಸಾಲಕ್ಕೆ ₹35,000 ವಿನಾಯಿತಿ!

ಚೆನ್ನೈ: ತಮಿಳುನಾಡಿನ (Tamil Nadu) ಮುಖ್ಯಮಂತ್ರಿ ದಳಪತಿ ವಿಜಯ್ ಅವರು ರೈತರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದು, ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಬೆಳೆ ಸಾಲ ಮನ್ನಾ ಯೋಜನೆಯನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ವಿಜಯ್ ಸರ್ಕಾರ, ಭೂಮಿಯ ವಿಸ್ತೀರ್ಣದ ಮಿತಿ ಇಲ್ಲದೆ ಎಲ್ಲಾ ವರ್ಗದ ರೈತರು 2025ರ ಮೇ 1 ರಿಂದ 2026ರ ಫೆಬ್ರವರಿ 28ರ ಅವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳಿಂದ ಪಡೆದಿರುವ 75,000 ರೂಪಾಯಿ ವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ….

Read More
raghava Lawrence to contest in trichy east from TVK

TVK: ಉಪಚುನಾವಣೆ ಕಣಕ್ಕೆ ರಾಘವ ಲಾರೆನ್ಸ್? ಟಿವಿಕೆ ಮುಖ್ಯಸ್ಥ ವಿಜಯ್ ಹೊಸ ರಾಜಕೀಯ ನಡೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ವೇಳೆ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಕ್ಷೇತ್ರಗಳೆರಡರಲ್ಲೂ ಗೆದ್ದು ಬೀಗಿದ್ದ ಮುಖ್ಯಮಂತ್ರಿ ವಿಜಯ್ ಅವರು, ಬಳಿಕ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನವನ್ನು ತೆರವುಗೊಳಿಸಿದರು. ಹೀಗೆ ತೆರವಾಗಿರುವ ಈ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ಎದುರಾಗಲಿದ್ದು, ಇಲ್ಲಿ ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಭ್ಯರ್ಥಿಯಾಗಿ ಖ್ಯಾತ ನಟ ರಾಘವ ಲಾರೆನ್ಸ್ ಅವರನ್ನು ಕಣಕ್ಕಿಳಿಸಲು ವಿಜಯ್ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಗುರು ರಜನಿಕಾಂತ್ ಮಾರ್ಗದರ್ಶನದಲ್ಲಿ ಲಾರೆನ್ಸ್…

Read More
tamil nadu bjp k Annamalai resigned

Annamalai: ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ: ರಜನಿಕಾಂತ್ ಪಂಚ್ ಡೈಲಾಗ್ ಹೆಸರಲ್ಲಿ ಹೊಸ ಪಕ್ಷ ಕಟ್ಟಲು ಮಾಜಿ ಐಪಿಎಸ್ ಸಿಂಗಂ ಸಿದ್ಧತೆ!

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಭಾರಿ ರಾಜಕೀಯ ದ್ರುವೀಕರಣಕ್ಕೆ ವೇದಿಕೆ ಸಿದ್ಧವಾಗಿದ್ದು, ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರು ಕಮಲ ಪಾಳಯ ತೊರೆದು ಸ್ವಂತ ರಾಜಕೀಯ ಪಕ್ಷ ಕಟ್ಟಲು ನಿರ್ಧರಿಸಿದ್ದಾರೆ. ಜೂನ್ 2 ರಂದು ಅವರು ತಮ್ಮ ಅಂತಿಮ ನಿರ್ಧಾರವನ್ನು ಬಿಜೆಪಿ ವರಿಷ್ಠರಿಗೆ ತಿಳಿಸಲಿದ್ದಾರೆ ಎಂದು ನಂಬಲಾರ್ಹ ಮೂಲಗಳು ಖಚಿತಪಡಿಸಿವೆ. ಆರಂಭದಲ್ಲಿ ಅವರು ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಜನಾಂದೋಲನ (ಜನರ ಚಳವಳಿ) ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಅದನ್ನು ಅಧಿಕೃತ ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಲಿದ್ದಾರೆ….

Read More
producer gives updated about vijays Jana Nayagan

Jana Nayagan: ಜನನಾಯಗನ್ ರಿಲೀಸ್‌ ಯಾವಾಗ? ನಿರ್ಮಾಪಕರು ಹೇಳಿದ್ದೇನು?

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನಟನೆಯ, ಪ್ರೇಕ್ಷಕರು ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿರುವ ಅವರ ಕೊನೆಯ ಚಿತ್ರ ‘ಜನನಾಯಗನ್’ (Jana Nayagan) ಸಿನಿಮಾದ ಬಿಡುಗಡೆ ಇನ್ನು ಕೂಡ ಅನಿಶ್ಚಿತತೆಯಲ್ಲೇ ಮುಂದುವರಿದಿದೆ. ಹಲವು ತಿಂಗಳುಗಳಿಂದ ವಿಳಂಬವಾಗುತ್ತಿರುವ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಇನ್ನು ಕೂಡ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ ಎಂಬುದನ್ನು ಚಿತ್ರದ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ನಿರ್ದೇಶಕ ಎಚ್. ವಿನೋತ್ ಸಾರಥ್ಯದ ಈ ರಾಜಕೀಯ ಆಕ್ಷನ್ ಡ್ರಾಮಾ…

Read More
Dmk mk stalin big statement about cm vijay government

MK Stalin: ಟಿವಿಕೆ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ನಮ್ಮ ಕೃಪೆಯಿಂದ ಅಧಿಕಾರದಲ್ಲಿದೆ: ಮುಖ್ಯಮಂತ್ರಿ ವಿಜಯ್ ವಿರುದ್ಧ ಎಂ.ಕೆ. ಸ್ಟಾಲಿನ್ ವಾಗ್ದಾಳಿ

ಚೆನ್ನೈ: ತಮಿಳುನಾಡಿನ ಇತ್ತೀಚಿನ ರಾಜಕೀಯ ಆಡಳಿತ ಬದಲಾವಣೆಯ ನಂತರ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಸಮರ ತಾರಕಕ್ಕೇರಿದೆ. ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರದ ವಿರುದ್ಧ ಡಿಎಂಕೆ (DMK) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ (MK Stalin) ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ನಟ ವಿಜಯ್ ಅವರ ನೇತೃತ್ವದ ಈ ಹೊಸ ಆಡಳಿತವು ತನ್ನ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರೈಸಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದಿರುವ ಅವರು,…

Read More