West Bengal: ಸುವೇಂದು ಅಧಿಕಾರಿ ಆಪ್ತನ ಹತ್ಯೆ: ಐಜಿ ನೇತೃತ್ವದ ಎಸ್ಐಟಿ ತಂಡದಿಂದ ತನಿಖೆ ಆರಂಭ; ಬಂಗಾಳದಲ್ಲಿ ಹೈ ಅಲರ್ಟ್
ಕೋಲ್ಕತ್ತಾ: ಬಂಗಾಳದ (West Bengal) ರಾಜಕೀಯ ಸಂಘರ್ಷಕ್ಕೆ ಈಗ ಬಿಜೆಪಿ ನಾಯಕನ ಆಪ್ತ ಬಲಿಯಾಗಿದ್ದು, ಪ್ರಕರಣದ ಗಂಭೀರತೆ ಅರಿತ ಪೊಲೀಸರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದ ಈ ಹತ್ಯೆಯು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ದಾಳಿ ನಡೆದಿದ್ದು ಹೇಗೆ? ಬುಧವಾರ ತಡರಾತ್ರಿ 10:30ರ ಸುಮಾರಿಗೆ ಚಂದ್ರನಾಥ್ ರಥ್ ಅವರು ಕೋಲ್ಕತ್ತಾದಿಂದ ಸ್ಕಾರ್ಪಿಯೋ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಮಧ್ಯಮಗ್ರಾಮದ ದೋಹ್ರಿಯಾ ಬಳಿ ಅಜ್ಞಾತ ಕಾರೊಂದು ಇವರ ವಾಹನವನ್ನು ಅಡ್ಡಗಟ್ಟಿದೆ. ತಕ್ಷಣವೇ…
