Temple: ದರ್ಶನ್ ಸಂಕಷ್ಟಗಳ ಕಾಲದ ಆಸರೆ ಅಳದಂಗಡಿ ಕಲ್ಲುರ್ಟಿ ದೈವ: ಈ ಬಾರಿ ದೈವದ ಸನ್ನಿಧಿಗೆ ಬಾರದ ಕುಟುಂಬ
ಮಂಗಳೂರು: ಚಿತ್ರರಂಗದ ಸೂಪರ್ ಸ್ಟಾರ್ ಆಗಿರಲಿ ಅಥವಾ ರಾಜಕೀಯದ ಘಟಾನುಘಟಿ ನಾಯಕರೇ ಇರಲಿ, ವೈಯಕ್ತಿಕ ಜೀವನದಲ್ಲಿ ತೀವ್ರ ಸಂಕಷ್ಟ ಎದುರಾದಾಗ ದೈವ-ದೇವರ ಮೊರೆ ಹೋಗುವುದು ಕರಾವಳಿಯ ಆಚರಣೆಗಳಲ್ಲಿ ಪ್ರಮುಖವಾದದ್ದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ದಿವಂಗತ ಸುಷ್ಮಾ ಸ್ವರಾಜ್ ಅವರಂತಹ ಪ್ರಮುಖ ನಾಯಕರು ನಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ‘ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ’ (Temple) ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಅವರ ಜೀವನದ…
