TOP NEWS

Shocking: ಭವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಐತಿಹಾಸಿಕ ನಿಧಿ ಪತ್ತೆ: ಬಾವಿಯೊಳಗೆ ಸಿಕ್ಕ ಏಳು ಪುರಾತನ ವಿಗ್ರಹಗಳು!

andra pradesh Seven Idols Found while doing temple renovation

ಈಪೂರು: ಆಂಧ್ರಪ್ರದೇಶದ ಈಪೂರು ಗ್ರಾಮದ ಪುರಾತನ ಶ್ರೀ ಭವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯದ ವೇಳೆ ಅಚ್ಚರಿಯ ನಿಧಿಯೊಂದು (Shocking) ಪತ್ತೆಯಾಗಿದೆ. ಮಂಗಳವಾರ ರಾತ್ರಿ ದೇಗುಲದ ಆವರಣದ ಹಳೆಯ ಬಾವಿಯನ್ನು ಸ್ವಚ್ಛಗೊಳಿಸುವಾಗ, ಭಾರೀ ಗಾತ್ರದ ಕಲ್ಲುಗಳ ಅಡಿಯಲ್ಲಿ ಏಳು ಪುರಾತನ ಲೋಹದ ವಿಗ್ರಹಗಳು ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ.

ದಾಳಿಕೋರರಿಂದ ರಕ್ಷಿಸಲು ಬಚ್ಚಿಟ್ಟಿದ್ದರೇ?: ಕೇವಲ ವಿಗ್ರಹಗಳಷ್ಟೇ ಅಲ್ಲದೆ, ದೇವಸ್ಥಾನದ ಮತ್ತೊಂದು ಭಾಗದಲ್ಲಿ ಮೂರು ತಾಮ್ರದ ಶಾಸನಗಳು ಸಹ ಲಭ್ಯವಾಗಿವೆ. ಈ ಹಿಂದೆ ಪರಕೀಯರ ಆಕ್ರಮಣದ ಸಮಯದಲ್ಲಿ ದೇವಸ್ಥಾನದ ಅಮೂಲ್ಯ ವಿಗ್ರಹಗಳನ್ನು ರಕ್ಷಿಸಲು ಪೂಜಾರಿಗಳು ಅಥವಾ ರಾಜರು ಅವುಗಳನ್ನು ಬಾವಿ ಅಥವಾ ಭೂಮಿಯ ಆಳದಲ್ಲಿ ಗುಪ್ತವಾಗಿಡುತ್ತಿದ್ದರು ಎಂಬ ಇತಿಹಾಸವಿದೆ. ಈಗ ಪತ್ತೆಯಾಗಿರುವ ವಿಗ್ರಹಗಳು ಕೂಡ ಅಂತಹದ್ದೇ ರೋಚಕ ಇತಿಹಾಸವನ್ನು ಹೊಂದಿರಬಹುದು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.

ಪಂಚಲೋಹದ ವಿಗ್ರಹಗಳ ಪರಿಶೀಲನೆ: ಪ್ರಾಥಮಿಕ ಮಾಹಿತಿಯ ಪ್ರಕಾರ ಇವು ಪಂಚಲೋಹದ ವಿಗ್ರಹಗಳಾಗಿದ್ದು, ಇವುಗಳ ಕಾಲಮಾನದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಜಿ.ವಿ. ಆಂಜನೇಯಲು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವಿಗ್ರಹಗಳನ್ನು ಸದ್ಯ ಪೊಲೀಸ್ ಭದ್ರತೆಯಲ್ಲಿ ಸುರಕ್ಷಿತವಾಗಿರಿಸಲಾಗಿದ್ದು, ಪುರಾತತ್ವ ಇಲಾಖೆಯ ತಜ್ಞರು ಇವುಗಳ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ಹೆಚ್ಚುತ್ತಿರುವ ಐತಿಹಾಸಿಕ ಕುರುಹುಗಳು: ಕೇವಲ ಆಂಧ್ರಪ್ರದೇಶ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಒಡಿಶಾದಂತಹ ರಾಜ್ಯಗಳ ಹಳೆಯ ದೇವಾಲಯಗಳಲ್ಲೂ ಇಂತಹ ಪವಿತ್ರ ಕುರುಹುಗಳು ಲಭ್ಯವಾಗುತ್ತಿವೆ. ಭಾರತದ ಪುರಾತನ ಸಂಸ್ಕೃತಿ ಮತ್ತು ದೇಗುಲಗಳ ಅಡಿಯಲ್ಲಿ ಇನ್ನು ಎಷ್ಟೋ ಐತಿಹಾಸಿಕ ರಹಸ್ಯಗಳು ಅಡಗಿರಬಹುದು ಎಂಬ ಕುತೂಹಲ ಈ ಘಟನೆಯಿಂದ ಮತ್ತೆ ಚಿಗುರಿದೆ.

ಇದನ್ನೂ ಓದಿ: ಲಂಚದ ನೋಟುಗಳನ್ನು ತಿಂದ ಇಲಿಗಳು!: ಬಿಹಾರ ಪೊಲೀಸರ ವಾದಕ್ಕೆ ಸುಪ್ರೀಂ ಕೋರ್ಟ್ ಅಚ್ಚರಿ

Leave a Reply

Your email address will not be published. Required fields are marked *