TOP NEWS
kerala government free bus to ladies from june 15

Kerala: ಕೇರಳದ ನಾರಿಮಣಿಯರಿಗೆ ಸಿಹಿ ಸುದ್ದಿ: ಜೂನ್ 15 ರಿಂದ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ

ತಿರುವನಂತಪುರಂ: ದಕ್ಷಿಣ ಭಾರತದ ಇತರ ರಾಜ್ಯಗಳಾದ ಕರ್ನಾಟಕ ಹಾಗೂ ತೆಲಂಗಾಣದ ಮಾದರಿಯಲ್ಲೇ ಈಗ ಕೇರಳದಲ್ಲೂ (Kerala) ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ‘ಉಚಿತ ಪ್ರಯಾಣ’ ಭಾಗ್ಯ ಲಭಿಸಿದೆ. ಯುಡಿಎಫ್ (UDF) ನೇತೃತ್ವದ ಸರ್ಕಾರವು ತನ್ನ ಪ್ರಮುಖ ಚುನಾವಣಾ ಗ್ಯಾರಂಟಿಯನ್ನು ಈಡೇರಿಸಿದ್ದು, ಜೂನ್ 15 ರಿಂದ ಅನ್ವಯವಾಗುವಂತೆ ರಾಜ್ಯದ ಮಹಿಳೆಯರಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಆರ್ಡಿನರಿ ಬಸ್‌ಗಳಲ್ಲಿ ಉಚಿತ ಸೌಲಭ್ಯ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಘೋಷಿಸಿದ್ದಾರೆ. 800 ಕೋಟಿ ಆರ್ಥಿಕ ಹೊರೆ ಈ ಮಹತ್ವಾಕಾಂಕ್ಷಿ…

Read More
indian railway to use induction for Cooking

Indian Railway: ರೈಲಿನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಬಿಸಿ ಬಿಸಿ ಊಟ, ಇಂಡಕ್ಷನ್ ಸ್ಟೌವ್ ಮೂಲಕ ಅಡುಗೆ

ನವದೆಹಲಿ: ದೇಶಾದ್ಯಂತ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವವು ಭಾರತೀಯ ರೈಲ್ವೆ (Indian Railway) ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮವನ್ನು (IRCTC) ದಶಕದ ಹಳೆಯ ಪದ್ಧತಿಯತ್ತ ಮುಖ ಮಾಡುವಂತೆ ಮಾಡಿದೆ. ಹೌದು, ಸಿಲಿಂಡರ್ ಕೊರತೆಯಿಂದಾಗಿ ಕ್ಯಾಟರಿಂಗ್ ಸೇವೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಚಲಿಸುವ ರೈಲುಗಳಲ್ಲೇ ಮತ್ತೆ ಅಡುಗೆ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ. ಆದರೆ, ಈ ಹಿಂದಿನಂತೆ ಗ್ಯಾಸ್ ಸಿಲಿಂಡರ್ ಬಳಸಿ ಅಪಾಯಕಾರಿ ರೀತಿಯಲ್ಲಿ ಅಡುಗೆ ಮಾಡುವ ಬದಲು, ಈ ಬಾರಿ…

Read More
new ATM scam fraudsters allegedly tampered

ATM Scam: ಏಟಿಎಂ ಕ್ಯಾಶ್‌ ಬಾಕ್ಸ್‌ಗೆ ಟೇಪ್‌ ಅಂಟಿಸಿ ಗ್ರಾಹಕರಿಗೆ ಪಂಗನಾಮ

ಪ್ರಯಾಗ್‌ರಾಜ್: ಬ್ಯಾಂಕ್ ಖಾತೆದಾರರನ್ನು ಲೂಟಿ ಮಾಡಲು ಸೈಬರ್ ಕಳ್ಳರು ಹಾಗೂ ಸ್ಥಳೀಯ ವಂಚಕರು ದಿನಕ್ಕೊಂದು ವಿನೂತನ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಏಟಿಎಂ (ATM Scam) ಯಂತ್ರದ ಒಳಭಾಗವನ್ನೇ ಜಾಣ್ಮೆಯಿಂದ ಟ್ಯಾಂಪರ್ ಮಾಡಿ, ಗ್ರಾಹಕರು ಡ್ರಾ ಮಾಡುವ ಹಣವನ್ನು ಕದಿಯುವ ಸಖತ್ ಡೇಂಜರಸ್ ಸ್ಕ್ಯಾಮ್ ಒಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬ್ಯಾಂಕ್ ಆಫ್ ಬರೋಡಾದ ಏಟಿಎಂ ಕೇಂದ್ರವೊಂದರಲ್ಲಿ ವಂಚಕರು ಈ ಕೃತ್ಯ ಎಸಗಿದ್ದು, ಪ್ರಸ್ತುತ ಇದಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ…

Read More
viral news family finds 27 snake hatchlings in their water tank

Viral News: ಒಂದೇ ಟ್ಯಾಂಕ್‌ನಲ್ಲಿ 27 ಹಾವಿನ ಮರಿಗಳು!

ಹರಿದ್ವಾರ: ಉತ್ತರಾಖಂಡದ ಪವಿತ್ರ ನಗರಿ ಹರಿದ್ವಾರದ ಸಮೀಪದ ಹಳ್ಳಿಯೊಂದರಲ್ಲಿ ಅತ್ಯಂತ ದಿಗ್ಭ್ರಮೆಗೊಳಿಸುವ ಘಟನೆಯೊಂದು ಜರುಗಿದೆ. ಮನೆಯೊಂದರ ಕುಡಿಯುವ (Viral News) ಹಾಗೂ ದಿನಬಳಕೆಯ ನೀರಿನ ಟ್ಯಾಂಕ್ ಒಳಗೆ ಬರೋಬ್ಬರಿ ಇಪ್ಪತ್ತೇಳು ಹಾವಿನ ಮರಿಗಳು ಒಟ್ಟಿಗೆ ಪತ್ತೆಯಾಗಿದ್ದು, ಇದನ್ನು ಕಂಡ ಮನೆಯವರು ಹಾಗೂ ಗ್ರಾಮಸ್ಥರು ಭೀತಿಯಿಂದ ಜಡವಾಗಿದ್ದಾರೆ. ಜಿಲ್ಲೆಯ ಸರಾಯ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಡೀ ಭಾಗದಲ್ಲಿ ಈ ಹಾವಿನದ್ದೇ ಚರ್ಚೆ ನಡೆಯುತ್ತಿದೆ. ಬಾವಿಯೊಳಗಿದ್ದ ಬರೋಬ್ಬರಿ 27 ಹಾವಿನ ಮರಿಗಳು ಸರಾಯ್ ಗ್ರಾಮದ ನಿವಾಸಿಯೊಬ್ಬರು…

Read More
Iran war and israel ceasefire donald trump to handle situation

Iran War: ಶಮನದತ್ತ ಪಶ್ಚಿಮ ಏಷ್ಯಾ ಬಿಕ್ಕಟ್ಟು, ಟ್ರಂಪ್ ಮಧ್ಯಸ್ಥಿಕೆ!

ಟೆಹ್ರಾನ್: ಕಳೆದ ಕೆಲವು ದಿನಗಳಿಂದ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದ್ದ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಜ್ವಾಲೆ ಸದ್ಯಕ್ಕೆ ತಣ್ಣಗಾಗುವ (Iran War) ಲಕ್ಷಣಗಳು ಕಾಣಿಸುತ್ತಿವೆ. ಬೈರೂತ್ ಹಾಗೂ ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ನೆಲದ ಮೇಲೆ ದೊಡ್ಡ ಪ್ರಮಾಣದ ರಾಕೆಟ್ ದಾಳಿ ನಡೆಸಿದ್ದ ಇರಾನ್, ಇದೀಗ ತನ್ನ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆಯಲು ಈ ಮಹತ್ವದ ತೀರ್ಮಾನ ಕೈಗೊಂಡಿರುವುದಾಗಿ ಇರಾನ್…

Read More
Taiwan and south Africa faced low in AI share market

AI: ಎಐ (AI) ಅಬ್ಬರ ತಣ್ಣಗಾಗುತ್ತಿದ್ದಂತೆ ಭಾರತಕ್ಕೆ ಮತ್ತೆ ಸಿಕ್ಕಿತು ಜಾಗತಿಕ ಗದ್ದುಗೆ: ದಕ್ಷಿಣ ಕೊರಿಯಾ, ತೈವಾನ್ ಮಾರುಕಟ್ಟೆಗಳು ಉಡೀಸ್!

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಅತಿಯಾದ ಕ್ರೇಜ್‌ನಿಂದಾಗಿ ಕಳೆದ ವಾರವಷ್ಟೇ ಭಾರತದ ಷೇರು ಮಾರುಕಟ್ಟೆಯನ್ನು ಹಿಂದಿಕ್ಕಿದ್ದ ತೈವಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ಭಾರಿ ಮುಖಭಂಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಐ ವಲಯದ ಷೇರುಗಳು ದಿಢೀರನೆ ನೆಲಕಚ್ಚಿದ ಪರಿಣಾಮ ಈ ಎರಡೂ ದೇಶಗಳ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಕಂಡು ಯಥಾಸ್ಥಾನಕ್ಕೆ ಮರಳಿವೆ. ಇದರ ನೇರ ಲಾಭ ಪಡೆದಿರುವ ಭಾರತೀಯ ಷೇರು ಬಜಾರ್, ಜಾಗತಿಕವಾಗಿ ತನ್ನ ಬಲಿಷ್ಠ 6ನೇ ಸ್ಥಾನವನ್ನು ಅತ್ಯಂತ ಯಶಸ್ವಿಯಾಗಿ ಮರಳಿ ಪಡೆದಿದೆ. ಒಂದೇ ವಾರದಲ್ಲಿ…

Read More
Kottiyoor temple controversy kannur dig promises to hep Karnataka people

Kottiyoor: ಕೊಟ್ಟಿಯೂರು ಶಿವನ ಸನ್ನಿಧಿಯಲ್ಲಿ ಭಕ್ತರ ಆಕ್ರೋಶ: ಕನ್ನಡಿಗರಿಗೆ ರಕ್ಷಣೆ ಹಾಗೂ ಗೂಂಡಾಗಿರಿ ವಿರುದ್ಧ ಕ್ರಮದ ಭರವಸೆ ನೀಡಿದ ಡಿಐಜಿ ಯತೀಶ್ಚಂದ್ರ

ಕಣ್ಣೂರು: ಕೇರಳದ ಸುಪ್ರಸಿದ್ಧ ಕೊಟ್ಟಿಯೂರು (Kottiyoor) ಶಿವನ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಮತ್ತು ಕರ್ನಾಟಕದ ಭಕ್ತರ ಮೇಲಿನ ಸ್ಥಳೀಯರ ದೌರ್ಜನ್ಯದ ಹಿನ್ನೆಲೆಯಲ್ಲಿ ಕಣ್ಣೂರು ವಲಯದ ಡಿಐಜಿ ಯತೀಶ್ಚಂದ್ರ ಅವರು ಪರಿಸ್ಥಿತಿಯ ವಿವರಣೆ ನೀಡಿದ್ದಾರೆ. ದೇವಸ್ಥಾನದ ನಿಗದಿತ ಸಾಮರ್ಥ್ಯಕ್ಕಿಂತಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಒಮ್ಮೆಲೇ ಆಗಮಿಸಿದ್ದರಿಂದ ಈ ಕಹಿ ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ. ಪದ್ಧತಿಗಳ ಅರಿವಿಲ್ಲದೆ ಹತಾಶರಾದ ಭಕ್ತರು ಸಾಮಾನ್ಯವಾಗಿ ಈ ದೇವಸ್ಥಾನದಲ್ಲಿ ಒಂದು ದಿನಕ್ಕೆ ಗರಿಷ್ಠ 1.25 ಲಕ್ಷ ಜನರಿಗೆ ಮಾತ್ರ…

Read More