CM Siddaramaiah: ರಾಜೀನಾಮೆ ಕೌಂಟ್ಡೌನ್ ನಡುವೆ ಸಿಎಂ ಸಿದ್ದರಾಮಯ್ಯ ‘ಜಾತಿ ಗಣತಿ’ ಬ್ರಹ್ಮಾಸ್ತ್ರ
ಬೆಂಗಳೂರು: ಹೈಕಮಾಂಡ್ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಸ್ಥಾನಕ್ಕೆ ನಾಳೆಯೇ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ರಾಜ್ಯ ರಾಜಕಾರಣದಲ್ಲಿ ತೀವ್ರಗೊಂಡ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಕೊನೆಯ ಕ್ಷಣದಲ್ಲಿ ‘ಜಾತಿ ಗಣತಿ’ ಎಂಬ ಪ್ರಬಲ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಭಾರಿ ಕುತೂಹಲ ಮೂಡಿಸಿರುವ ಜಾತಿ ಗಣತಿಯ ಮರು ಸಮೀಕ್ಷಾ ವರದಿಯು ಇಂದೇ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿರುವುದು, ಸದ್ಯದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ದಟ್ಟ ಮುನ್ಸೂಚನೆ ನೀಡಿದೆ. ಇಂದು ನಡೆಯುತ್ತಿದೆ ಉನ್ನತ ಮಟ್ಟದ ಸಭೆ…
