Kerala: ಶಾಸಕಿಯ ಆಲಿಂಗನಕ್ಕೆ ಯತ್ನಿಸಿದ ಹಿರಿಯ ನಾಯಕ: ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದ್ದೇನು?
ತಿರುವನಂತಪುರ: ಕೊಲ್ಲಂ ಕ್ಷೇತ್ರದ ನೂತನ ಶಾಸಕಿ ಬಿಂದು ಕೃಷ್ಣ ಅವರು ಚುನಾವಣಾ ಗೆಲುವಿನ ನಂತರ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾಗ ಈ ಮುಜುಗರದ (Kerala) ಸನ್ನಿವೇಶ ಎದುರಾಗಿದೆ. ಕಚೇರಿಯಲ್ಲಿದ್ದ ನಾಯಕರಿಗೆ ಬಿಂದು ಕೃಷ್ಣ ಅವರು ಕೈಮುಗಿದು ಅಥವಾ ಹಸ್ತಲಾಘವ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಎದುರಾದಾಗ ಬಿಂದು ಅವರು ಕೈಕುಲುಕಲು ಮುಂದಾಗಿದ್ದಾರೆ. ಆದರೆ, ಬಿಂದು ಅವರ ಹಸ್ತಲಾಘವವನ್ನು ಗಮನಿಸದ ಫಿಲಿಪ್, ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದಾರೆ….
