Mysuru Dasara: ಮೈಸೂರು ದಸರಾದಲ್ಲಿ ‘ಕಂಬಳ’ ಜಿದ್ದಾಜಿದ್ದಿ: ಸಂಸದ ಯದುವೀರ್ ವಿರೋಧ, ಮನವೊಲಿಕೆಗೆ ಶಾಸಕ ಅಶೋಕ್ ರೈ ಕಸರತ್ತು!
ಮೈಸೂರು: ಕರಾವಳಿಯ ಸಾಂಪ್ರದಾಯಿಕ ಕೆಸರುಗದ್ದೆ ಕ್ರೀಡೆಯಾದ ‘ಕಂಬಳ’ ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಆಯೋಜನೆಗೊಳ್ಳುವ ಮುನ್ನವೇ ಭಾರಿ ವಿವಾದಕ್ಕೆ ಕಾರಣವಾಗಿದೆ. ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ತುಳುನಾಡಿನ ಈ ವೈಭವವನ್ನು, ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪರಿಚಯಿಸಲು ವೇದಿಕೆ ಸಿದ್ಧವಾಗುತ್ತಿತ್ತು. ಆದರೆ, ಇದಕ್ಕೆ ಮೈಸೂರು ರಾಜಮನೆತನ ಹಾಗೂ ಸ್ಥಳೀಯ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿರುವುದು ಈಗ ಹೊಸ ಸಂಚಲನ ಮೂಡಿಸಿದೆ. ದಸರಾ ಪ್ರಯುಕ್ತ ಎರಡು ದಿನಗಳ…
