DK Shivakumar: ಕಾಲ ಕೂಡಿ ಬಂತು, ಕನಸು ನನಸಾಯ್ತು: ಡಿಕೆಶಿ ಹಳೆಯ ಭಗವದ್ಗೀತೆ ಶ್ಲೋಕದ ವಿಡಿಯೋ ವೈರಲ್!
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಜವಾಬ್ದಾರಿ ವಹಿಸಿಕೊಳ್ಳುವ ಐತಿಹಾಸಿಕ ಕ್ಷಣ ಹತ್ತಿರವಾಗುತ್ತಿದ್ದಂತೆ, ಅವರ ದೈವಚಿಂತನೆ ಮತ್ತು ಆಧ್ಯಾತ್ಮಿಕ ನಿಲುವಿನ ಕುರಿತ ಚರ್ಚೆಗಳು ಮುಂಚೂಣಿಗೆ ಬಂದಿವೆ. ವಿಶೇಷವಾಗಿ ಅವರು ಈ ಹಿಂದೆ ನಡೆಸಿದ್ದ ಸಂದರ್ಶನವೊಂದರ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜಕೀಯದ ಏಳುಬೀಳುಗಳು ಹಾಗೂ ಸಿಎಂ ಗದ್ದುಗೆಯ ಬಗ್ಗೆ ಅಂದು ಅವರು ಆಡಿದ್ದ ಭವಿಷ್ಯದ ಮಾತುಗಳು ಇಂದು ನಿಜವಾಗಿರುವುದನ್ನು ಕಂಡು ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ಶುಭ ಮುಹೂರ್ತವನ್ನು ಯಾರೂ ತಡೆಯಲು ಸಾಧ್ಯವಿಲ್ಲ!…
