T20 World Cup: ಸೂರ್ಯ ಕುಮಾರ್‌ ಕ್ಯಾಪ್ಟೆನ್ಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೊಹಮ್ಮದ್ ಕೈಫ್

T20 World Cup Suryakumar Yadav Grilled Over Captaincy

ಶ್ರೀಲಂಕಾ: ಭಾರತ ತಂಡವು ನಡೆಯುತ್ತಿರುವ ಟಿ20 ವಿಶ್ವಕಪ್‌ನ (T20 World Cup) ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಸೂಪರ್ 8 ಪಂದ್ಯದಲ್ಲಿ 7ನೇ ಮತ್ತು 15ನೇ ಓವರ್‌ಗಳ ನಡುವೆ ಸೋತಿತು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಜಸ್ಪ್ರಿತ್ ಬುಮ್ರಾ ಬಳಕೆ ಬಗ್ಗೆ ಅಸಮಾಧಾನ

ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,. ಈ ಓವರ್‌ಗಳಲ್ಲಿ ಭಾರತ ತಂಡವು ವೇಗಿ ಜಸ್ಪ್ರಿತ್ ಬುಮ್ರಾ ಅವರನ್ನು ಬಳಸದೆ ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ  ಜೊತೆಯಾಟ ಮುಂದುವರೆಸಲು ಬಿಟ್ಟಿತ್ತು, ಇದರಿಂದ ಮ್ಯಾಚ್‌ ಕೈತಪ್ಪಿ ಹೋಗಿದೆ ಎಂದಿದ್ದಾರೆ. ಅಲ್ಲದೇ,  ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಎಂದಿಗೂ ಬುಮ್ರಾ ಅವರನ್ನು ಈ ರೀತಿ ಬಳಸಲಿಲ್ಲ ಮತ್ತು ಹಿಟ್‌ಮ್ಯಾನ್ ಯಾವಾಗಲೂ ನಿರ್ಣಾಯಕ ವಿಕೆಟ್‌ಗಳನ್ನು ಪಡೆಯಲು ಮಧ್ಯಮ ಓವರ್‌ಗಳಲ್ಲಿ ಪವರ್-ಪ್ಲೇ ನಂತರ ಬುಮ್ರಾ ಅವರನ್ನು ಮತ್ತೆ ಆಡಿಸುತ್ತಿದ್ದರು ಎಂದಿದ್ದಾರೆ.

ಮೊಹಮ್ಮದ್ ಕೈಫ್ ಹೇಳಿದ್ದೇನು?

ನಾವು 7ನೇ ಮತ್ತು 15ನೇ ಓವರ್‌ಗಳ ನಡುವಿನ ಪಂದ್ಯವನ್ನು ಸೋತಿದ್ದೇವೆ. ನೀವು ಬುಮ್ರಾ ಅವರ ಎರಡು ಓವರ್‌ಗಳನ್ನು ಆರಂಭದಲ್ಲಿಯೇ ಬಳಸಿದ್ದೀರಿ ಮತ್ತು ಉಳಿದ ಎರಡು ಓವರ್‌ಗಳನ್ನು ಸರಿಯಾಗಿ ಆಡಿಸಿಲ್ಲ. ಆದರೆ ರೋಹಿತ್ ಶರ್ಮಾ ಎಂದಿಗೂ ಬುಮ್ರಾ ಅವರನ್ನು ಈ ರೀತಿ ಬಳಸಿಲ್ಲ ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. ತಂಡದಲ್ಲಿ ಬುಮ್ರಾಗಿಂತ ದೊಡ್ಡ ಪಂದ್ಯ ವಿಜೇತರು ಯಾರೂ ಇಲ್ಲ. ಪವರ್‌ಪ್ಲೇನಲ್ಲಿ ಅವರನ್ನು ಕೇವಲ ಒಂದು ಓವರ್‌ಗೆ ಬೌಲ್ ಮಾಡಲು ಬಿಡಬೇಕು, ಮತ್ತು ನಂತರ ಅವರನ್ನು 11 ಅಥವಾ 12 ನೇ ಓವರ್‌ಗೆ ಬೌಲ್ ಮಾಡಿಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ದ ಸೋತ ಭಾರತ, ಸೆಮಿ ಫೈನಲ್‌ ತಲುಪೋದು ಕಷ್ಟನಾ?

Leave a Reply

Your email address will not be published. Required fields are marked *