west bengal election bjp and eci looted over 100 seats mamata banerjee

Mamata Banerjee: ಬಂಗಾಳದಲ್ಲಿ ‘ಕಮಲ’ ಜಯಭೇರಿ: ಚುನಾವಣೆ ಆಯೋಗ ಮತ್ತು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ ಇತಿಹಾಸ ಬರೆಯುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಆರೋಪಿಸಿರುವ ಅವರು, ಈ ಗೆಲುವನ್ನು “ಅನೈತಿಕ ಜಯ” ಎಂದು ಕರೆದಿದ್ದಾರೆ. ಕಳೆದ 15 ವರ್ಷಗಳಿಂದ ಬಂಗಾಳವನ್ನು ಆಳುತ್ತಿದ್ದ ದೀದಿ ಸಾಮ್ರಾಜ್ಯ ಈ ಬಾರಿ ಪತನಗೊಂಡಿದ್ದು, ಕೇಸರಿ ಪಡೆ ಮೊದಲ ಬಾರಿಗೆ ಸ್ವಂತ ಬಲದ ಮೇಲೆ…

Read More
tamil nadu election tvk vijay won in 2 constancy

Vijay: ಪೆರಂಬೂರ್ ಹಾಗೂ ಟ್ರಿಚಿ ಎರಡೂ ಕ್ಷೇತ್ರಗಳಲ್ಲಿ ವಿಜಯ್‌ಗೆ ಭರ್ಜರಿ ಗೆಲುವು!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಕ್ಷರಶಃ ವಿಜಯ ಪತಾಕೆ ಹಾರಿಸಿದೆ. ಸ್ವತಃ ವಿಜಯ್ ಅವರು ಸ್ಪರ್ಧಿಸಿದ್ದ ಚೆನ್ನೈನ ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದ್ದಾರೆ. ಡಿಎಂಕೆ ಹಿಡಿತದಲ್ಲಿದ್ದ ಈ ಕ್ಷೇತ್ರಗಳಲ್ಲಿ ವಿಜಯ್ ಅವರ ಎಂಟ್ರಿ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದೆ. ಪ್ರಬಲ ಎದುರಾಳಿಗಳ ವಿರುದ್ಧ ಜಯ: ಚೆನ್ನೈನ ಪೆರಂಬೂರ್ ಕ್ಷೇತ್ರವು ದಶಕಗಳಿಂದ…

Read More
Narendra Modi Bengal today is free from fear

Narendra Modi: ಬಂಗಾಳದಲ್ಲಿ ‘ಪರಿಬೋರ್ತನ್’: ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ ಎಂದು ಗುಡುಗಿದ ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಸಾಂಪ್ರದಾಯಿಕ ಬಂಗಾಳಿ ಶೈಲಿಯ ದೋತಿಯಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಬಂಗಾಳದ ನೆಲದಲ್ಲಿ ಅಕ್ಷರಶಃ ‘ಪರಿಬೋರ್ತನ್’ (ಬದಲಾವಣೆ) ಗಾಳಿ ಬೀಸಿದೆ ಎಂದು ಬಂಗಾಳಿ ಭಾಷೆಯಲ್ಲೇ ಘೋಷಿಸಿದರು. ಗಂಗೆಯ ಉಗಮ ಸ್ಥಾನವಾದ ಗಂಗೋತ್ರಿಯಿಂದ ಹಿಡಿದು ಅವಳು ಸಮುದ್ರ ಸೇರುವ ಬಂಗಾಳದ ಗಂಗಾಸಾಗರದವರೆಗೆ ಅಂದರೆ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ ಮತ್ತು ಈಗ…

Read More
tamil nadu vijay tvk Virugambakkam candidate video viral

TVK: ಸಿನೆಮಾ ಸ್ಟೈಲ್‌ನಲ್ಲಿ ಚಾಲಕನ ಮಗ ಈಗ ಶಾಸಕ! ವಿರುಗಂಬಕ್ಕಂನಲ್ಲಿ ಡಿಎಂಕೆ ಭದ್ರಕೋಟೆ ಭೇದಿಸಿದ ವಿಜಯ್ ಆಪ್ತ ಶಬರಿನಾಥನ್

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ ವಿಜಯ್ ಅವರ TVK ಪಕ್ಷವು, ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನ ನೀಡುವ ಮೂಲಕ ಗಮನ ಸೆಳೆದಿದೆ. ವಿಶೇಷವಾಗಿ ವಿಜಯ್ ಅವರ ದೀರ್ಘಕಾಲದ ಚಾಲಕ ಹಾಗೂ ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಆರ್. ಶಬರಿನಾಥನ್, ಚೆನ್ನೈನ ವಿರುಗಂಬಕ್ಕಂ ಕ್ಷೇತ್ರದಲ್ಲಿ ಪ್ರಬಲ ಡಿಎಂಕೆ ಅಭ್ಯರ್ಥಿಯನ್ನು ಸೋಲಿಸಿ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಭಾವನಾತ್ಮಕ ಗೆಲುವು: ಅಭ್ಯರ್ಥಿಗಳ ಘೋಷಣೆ ಸಂದರ್ಭದಲ್ಲಿ ವಿಜಯ್ ಅವರು ಶಬರಿನಾಥನ್ ಹೆಸರನ್ನು ಪ್ರಕಟಿಸಿದಾಗ, ತಂದೆ-ಮಗ ಇಬ್ಬರೂ ವೇದಿಕೆಯ…

Read More
DN Jeevaraj reaction about dk shivakumar statement

DN Jeevaraj: ಶೃಂಗೇರಿ ಮರುಮತ ಏಣಿಕೆ, ಡಿಕೆಶಿಗೆ ಜೀವರಾಜ್‌ ಟಾಂಗ್

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಮರು ಎಣಿಕೆಯಲ್ಲಿ ಜಯ ಸಾಧಿಸಿರುವ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್ (DN Jeevaraj) ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಉಭಯ ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ. ಬೆದರಿಕೆ ತಂತ್ರ ನಡೆಯಲ್ಲ: ಡಿಕೆಶಿಗೆ ಜೀವರಾಜ್ ಟಾಂಗ್ ಮರು ಎಣಿಕೆಯಲ್ಲಿ ಗೆಲುವು ದಾಖಲಿಸಿದ ನಂತರ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ…

Read More
tamil nadu who is tvk candidate vs babu

Tamil Nadu: ಕೊಳತ್ತೂರು ಕೋಟೆಯಲ್ಲಿ ಸ್ಟಾಲಿನ್‌ಗೆ ಅನಿರೀಕ್ಷಿತ ಸೋಲು: ವಿಜಯ್ ಸಾರಥ್ಯದ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬುಗೆ ಐತಿಹಾಸಿಕ ಜಯ!

ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭಾ ಚುನಾವಣಾ ಫಲಿತಾಂಶವು ದ್ರಾವಿಡ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ತಮ್ಮದೇ ಭದ್ರಕೋಟೆಯಾದ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ 8,000ಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದಾರೆ. ಈ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದ್ದು, ವಿಜಯ್ ಅವರ ಪಕ್ಷ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಬ್ಬರಿಸುತ್ತಿದೆ. ಸ್ಟಾಲಿನ್ ವಿಜಯಕ್ಕೆ ಶ್ರಮಿಸಿದ್ದ ನಾಯಕನಿಂದಲೇ…

Read More
vijay TVK rare achievement like TDP and AAP

TVK: ತಮಿಳುನಾಡು ರಾಜಕೀಯದಲ್ಲಿ ವಿಜಯ್ ಸುನಾಮಿ, ರಾಜಕೀಯದ ಹೊಸ ‘ಯೂನಿಕಾರ್ನ್’ ಟಿವಿಕೆ!

ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೈತ್ಯ ಪಕ್ಷಗಳನ್ನು ಬದಿಗೆ ಸಳ್ಳಿ, ನಟ ವಿಜಯ್ (Vijay) ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಅಧಿಕಾರದ ಹತ್ತಿರಕ್ಕೆ ಬಂದಿದೆ. ಚೊಚ್ಚಲ ಚುನಾವಣೆಯಲ್ಲೇ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಿರುವ ವಿಜಯ್ ಅವರ ಈ ಸಾಧನೆಯನ್ನು ರಾಜಕೀಯ ವಿಶ್ಲೇಷಕರು ‘ಬಿಗ್ ಬ್ಯಾಂಗ್’ ಕ್ಷಣ ಎಂದು ಕರೆಯುತ್ತಿದ್ದಾರೆ. ಮೊದಲ ಯತ್ನದಲ್ಲೇ ಭರ್ಜರಿ ಮುನ್ನಡೆ: ರಾಜ್ಯದ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ…

Read More