TOP NEWS
tamil nadu election mk satlin may loss against tvk candidate

TVK: ಸ್ಟಾಲಿನ್‌ಗೆ ಭಾರಿ ಹಿನ್ನಡೆ, ಮ್ಯಾಜಿಕ್ ನಂಬರ್ ಸನಿಹದಲ್ಲಿ ವಿಜಯ್!

ಚೆನ್ನೈ: ತಮಿಳುನಾಡು ರಾಜಕೀಯ ಅಖಾಡದಲ್ಲಿ ದಶಕಗಳ ದ್ರಾವಿಡ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ದಟ್ಟವಾಗಿವೆ. ಚೊಚ್ಚಲ ಚುನಾವಣೆಯಲ್ಲೇ ನಟ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಅಬ್ಬರದ ಮುನ್ನಡೆ ಸಾಧಿಸಿದ್ದು, ರಾಜ್ಯದಲ್ಲಿ ಹೊಸ ಯುಗ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ವಿಜಯ್ ಪಡೆ ಸರಳ ಬಹುಮತಕ್ಕೆ ಬೇಕಾದ 118 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯ ಹತ್ತಿರದಲ್ಲಿದೆ. ಸ್ವಕ್ಷೇತ್ರದಲ್ಲೇ ಸಿಎಂ ಸ್ಟಾಲಿನ್‌ಗೆ ಶಾಕ್! ಈ ಬಾರಿಯ ಚುನಾವಣೆಯ ಅತ್ಯಂತ ದೊಡ್ಡ ಅಚ್ಚರಿ ಎಂದರೆ ಮುಖ್ಯಮಂತ್ರಿ ಎಂ.ಕೆ….

Read More
karave narayana gowda request regarding Kannada Activists police case

Kannada Activists: ಕನ್ನಡ ಹೋರಾಟಗಾರರ ಮೇಲಿನ ಪೊಲೀಸ್ ಕೇಸ್ ವಾಪಸ್‌ ಪಡೆಯಿರಿ: ಗೃಹ ಸಚಿವರಿಗೆ ಟಿ.ಎ. ನಾರಾಯಣಗೌಡ ಆಗ್ರಹ

ಬೆಂಗಳೂರು: ನಾಡು, ನುಡಿ ಹಾಗೂ ನೆಲದ ರಕ್ಷಣೆಗಾಗಿ ಹೋರಾಡಿದ ಕನ್ನಡ (Kannada Activists) ಹೋರಾಟಗಾರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಒತ್ತಾಯಿಸಿದ್ದಾರೆ. ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಅವರು, ಹೋರಾಟಗಾರರು ಎದುರಿಸುತ್ತಿರುವ ಕಾನೂನು ಸಂಕಷ್ಟಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು. ಸರ್ಕಾರದ ವಿಳಂಬ ನೀತಿಗೆ ಕಿಡಿ ಕನ್ನಡ ಚಳವಳಿಗಾರರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

Read More
West Bengal assembly election points which helped BJP

West Bengal: ಬಂಗಾಳದಲ್ಲಿ ಕೇಸರಿ ಅಲೆ: ಬಿಜೆಪಿ ವಿಜಯಯಾತ್ರೆಯ ಹಿಂದಿನ 9 ಪ್ರಮುಖ ಕಾರಣಗಳು

ಪಶ್ಚಿಮ ಬಂಗಾಳದ ಚುನಾವಣಾ (West Bengal) ಕಣದಲ್ಲಿ ಈ ಬಾರಿ ಬಿಜೆಪಿ ಅಭೂತಪೂರ್ವ ಮುನ್ನಡೆ ಸಾಧಿಸಿರುವುದು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಳ್ವಿಕೆಗೆ ಬ್ರೇಕ್ ಹಾಕಿ, ಕೇಸರಿ ಪಡೆ 160ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಕಾರಣವಾದ ಪ್ರಮುಖ ಅಂಶಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು: ಬಿಜೆಪಿ ವಿಜಯಯಾತ್ರೆಯ ಹಿಂದಿನ ಕಾರಣಗಳು 1. ಮತದಾರರ ಪಟ್ಟಿ ‘ಶುದ್ಧೀಕರಣ’ದ ಎಫೆಕ್ಟ್ ಚುನಾವಣೆಗೂ ಮುನ್ನ ನಡೆದ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (SIR) ಬಿಜೆಪಿಗೆ ದೊಡ್ಡ…

Read More
Actor Vijay father offer congress a coalition

Actor Vijay: ಕಾಂಗ್ರೆಸ್‌ಗೆ ಮೈತ್ರಿ ಆಫರ್ ನೀಡಿದ ವಿಜಯ್ ತಂದೆ ಎಸ್‌ಎಸಿ!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಅಂತಿಮ ಘಟ್ಟಕ್ಕೆ ತಲುಪುತ್ತಿದ್ದು, ನಟ ವಿಜಯ್ (Actor Vijay) ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ದಶಕಗಳಿಂದ ಆಳ್ವಿಕೆ ನಡೆಸಿದ್ದ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ನಡುಗಿಸಿರುವ ವಿಜಯ್, ಅಧಿಕಾರದ ಗದ್ದುಗೆಯ ಸನಿಹಕ್ಕೆ ಬಂದು ನಿಂತಿದ್ದಾರೆ. ಈ ರೋಚಕ ಬೆಳವಣಿಗೆಯ ನಡುವೆಯೇ ವಿಜಯ್ ತಂದೆ, ಖ್ಯಾತ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿ ಪ್ರಸ್ತಾಪವಿಟ್ಟು ಹೊಸ ಸಂಚಲನ ಮೂಡಿಸಿದ್ದಾರೆ. ಮ್ಯಾಜಿಕ್ ನಂಬರ್…

Read More
bagalkot by election congress candidate umesh meti win

By Election: ಬಾಗಲಕೋಟೆ ಉಪಸಮರದಲ್ಲಿ ಕಾಂಗ್ರೆಸ್ ಗರ್ಜನೆ: ಚರಂತಿಮಠಗೆ ಸೋಲುಣಿಸಿ ‘ಕೈ’ ಹಿಡಿದ ಉಮೇಶ್ ಮೇಟಿ!

ಬಾಗಲಕೋಟೆ: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಐತಿಹಾಸಿಕ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರ ವಿರುದ್ಧ ಭರ್ಜರಿ ಪೈಪೋಟಿ ನಡೆಸಿದ ಉಮೇಶ್ ಮೇಟಿ, ಬರೋಬ್ಬರಿ 21,866 ಮತಗಳ ಬೃಹತ್ ಅಂತರದಿಂದ ವಿಜಯಶಾಲಿಯಾಗುವ ಮೂಲಕ ಬಣ್ಣದ ಲೋಕದಿಂದ ವಿಧಾನಸೌಧಕ್ಕೆ ಲಗ್ಗೆ ಇಟ್ಟಿದ್ದಾರೆ. ಮತಗಳ ಲೆಕ್ಕಾಚಾರ ಹೀಗಿದೆ: ಬಹಳ ರೋಚಕವಾಗಿ ಸಾಗಿದ ಮತ ಎಣಿಕೆಯ ಅಂತ್ಯಕ್ಕೆ ಉಮೇಶ್ ಮೇಟಿ ಅವರು ಒಟ್ಟು…

Read More
g parameshwar about mamata Banerjee allegation of vote deleting

G Parameshwar: ಬಂಗಾಳದ ಮತದಾನದಲ್ಲಿ ಅಕ್ರಮ ನಡೆದಿದೆಯೇ? ಪರಮೇಶ್ವರ್ ಪ್ರಶ್ನೆ

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದತ್ತ ಮುನ್ನಡೆಯುತ್ತಿರುವ ಬೆನ್ನಲ್ಲೇ, ಅಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಅನುಮಾನ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪದ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆಯ ಕಾನೂನುಬದ್ಧತೆಯ ಬಗ್ಗೆ ಸಚಿವರು ಪ್ರಶ್ನೆ ಎತ್ತಿದ್ದಾರೆ. ಕಾನೂನೂ ರೀತಿಯ ತನಿಖೆ ಅಗತ್ಯ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವುದು…

Read More
west bengal assembly election bjp historical victory

West Bengal: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ, 200ರ ಸನಿಹದಲ್ಲಿ ಕೇಸರಿ ಪಡೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಇಂದು ಬೃಹತ್‌ ರಾಜಕೀಯ ಬದಲಾವಣೆ ಕಂಡುಬರುತ್ತಿದೆ. ಮಧ್ಯಾಹ್ನದ ಅಪ್‌ಡೇಟ್ ಪ್ರಕಾರ, 293 ಸ್ಥಾನಗಳ ಪೈಕಿ ಬಿಜೆಪಿ ಬರೋಬ್ಬರಿ 192 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅಬ್ಬರಿಸುತ್ತಿದ್ದು, ತೃಣಮೂಲ ಕಾಂಗ್ರೆಸ್‌ ಭದ್ರಕೋಟೆ ಚಿದ್ರಗೊಂಡಿದೆ. ಬಿಜೆಪಿ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿರುವ ಬೆನ್ನಲ್ಲೇ, ಬಂಗಾಳದ ಗದ್ದುಗೆ ಏರುವ ಆ ‘ಅದೃಷ್ಟವಂತ’ ನಾಯಕ ಯಾರು ಎಂಬ ಚರ್ಚೆ ಈಗ ಗಲ್ಲಿಯಿಂದ ದಿಲ್ಲಿಯವರೆಗೆ ಶುರುವಾಗಿದೆ. ಸಿಎಂ ಕುರ್ಚಿಗಾಗಿ ದೆಹಲಿ ಮಟ್ಟದಲ್ಲಿ ಆರಂಭವಾಯ್ತು ಕಸರತ್ತು! ರಾಜ್ಯದಲ್ಲಿ…

Read More