TOP NEWS
Assam cm Himanta Biswa Sarma resigned

Assam: ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ರಾಜೀನಾಮೆ: ಮೇ 12ಕ್ಕೆ ನೂತನ ಸರ್ಕಾರದ ಪದಗ್ರಹಣ?

ಗುವಾಹಟಿ: ಅಸ್ಸಾಂ (Assam) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡ ಬೆನ್ನಲ್ಲೇ, ಆಡಳಿತಾತ್ಮಕ ಬದಲಾವಣೆಗಳು ವೇಗ ಪಡೆದುಕೊಂಡಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬುಧವಾರ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಹಂಗಾಮಿ ಸಿಎಂ ಆಗಿ ಮುಂದುವರಿಕೆ: ಗುವಾಹಟಿಯ ಲೋಕ ಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶರ್ಮಾ, ಇಡೀ ಸಚಿವ ಸಂಪುಟದ ಪರವಾಗಿ ರಾಜೀನಾಮೆ ಹಸ್ತಾಂತರಿಸಿದರು. ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ಹೊಸ ಸರ್ಕಾರ ರಚನೆಯಾಗುವವರೆಗೆ…

Read More
kodagu dubare elephant camp bridge construction fight between bjp and congress

Kodagu: ದುಬಾರೆ ತೂಗುಸೇತುವೆ ರಾಜಕೀಯ ಜಿದ್ದಾಜಿದ್ದಿ: ಸಚಿವ ಖಂಡ್ರೆಗೆ ಬಿಜೆಪಿ ಘೇರಾವ್, ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ

ಕುಶಾಲನಗರ: ಕೊಡಗಿನ (Kodagu) ಪ್ರಸಿದ್ಧ ಪ್ರವಾಸಿ ಕೇಂದ್ರ ದುಬಾರೆಯಲ್ಲಿ ಬಹುನಿರೀಕ್ಷಿತ ತೂಗುಸೇತುವೆ ನಿರ್ಮಾಣದ ವಿಚಾರವು ಈಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವಿನ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ. ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದು, ರಾಜಕೀಯ ವಲಯದಲ್ಲಿ ಬಿಸಿ ಏರಿಸಿದೆ. ಸಚಿವರ ವಾಹನ ತಡೆದ ಬಿಜೆಪಿ ಕಾರ್ಯಕರ್ತರು: ದುಬಾರೆ ಆನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ 7.50 ಕೋಟಿ ರೂಪಾಯಿ ವೆಚ್ಚದ ತೂಗುಸೇತುವೆ…

Read More
Aadhar card to elephants for DNA Profiling

Elephant: ಗಜಪಡೆಗೆ ಸಿಗಲಿದೆ ಡಿಜಿಟಲ್ ಗುರುತು: ಕುಮ್ಕಿ ಆನೆಗಳ ಡಿಎನ್‌ಎ ಪರೀಕ್ಷೆಗೆ ಅರಣ್ಯ ಇಲಾಖೆ ಚಾಲನೆ

ಪಲಮನೇರ್: ಮಾನವರಿಗೆ ಇರುವ ಆಧಾರ್ ಕಾರ್ಡ್ ಮಾದರಿಯಲ್ಲೇ ಈಗ ಆನೆಗಳಿಗೂ ಒಂದು ವಿಶಿಷ್ಟ ಗುರುತಿನ ದಾಖಲೆ ಸಿದ್ಧವಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್‌ನಲ್ಲಿರುವ ಕೌಂಡಿನ್ಯ ಅಭಯಾರಣ್ಯದಲ್ಲಿರುವ ‘ಕುಮ್ಕಿ’ ಆನೆಗಳಿಗೆ (Elephant) ಡಿಎನ್‌ಎ ಪ್ರೊಫೈಲಿಂಗ್ (DNA Profiling) ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಅರಣ್ಯ ಇಲಾಖೆ ಹೊಸ ಇತಿಹಾಸ ಬರೆದಿದೆ. ಕರ್ನಾಟಕದ ಆನೆಗಳಿಗೆ ಜೈವಿಕ ದಾಖಲಾತಿ: ಪ್ರಸ್ತುತ ಪಲಮನೇರ್ ಕ್ಯಾಂಪ್‌ನಲ್ಲಿರುವ ಜಯಂತ, ರಂಜನ್, ಅಭಿಮನ್ಯು, ಕೃಷ್ಣ, ದೇವ ಮತ್ತು ವಿನಯ್ ಎಂಬ ಆರು ಕುಮ್ಕಿ ಆನೆಗಳ ಮೇಲೆ…

Read More
good news central government lowered 42 tablets price

Good News: ಬಡವರ ಜೇಬಿಗೆ ಹೊರೆಯಿಲ್ಲ: ಬಿಪಿ, ಸಕ್ಕರೆ ಕಾಯಿಲೆ ಸೇರಿ 42 ಔಷಧಗಳ ದರ ಇಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಆರೋಗ್ಯ ವೆಚ್ಚದ ಭೀತಿಯಲ್ಲಿದ್ದ ರೋಗಿಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಮಾಧಾನ ನೀಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಬಳಸುವ ಒಟ್ಟು 42 ಅಗತ್ಯ ಔಷಧಗಳ (Good News) ಬೆಲೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ಯಾವೆಲ್ಲಾ ಮಾತ್ರೆಗಳ ಬೆಲೆ ಕಡಿಮೆ? ದಿನನಿತ್ಯ ಬಳಸುವ ಪ್ರಮುಖ ಕಾಂಬಿನೇಷನ್ ಔಷಧಗಳ ಬೆಲೆಯಲ್ಲಿ…

Read More
andra pradesh Seven Idols Found while doing temple renovation

Shocking: ಭವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಐತಿಹಾಸಿಕ ನಿಧಿ ಪತ್ತೆ: ಬಾವಿಯೊಳಗೆ ಸಿಕ್ಕ ಏಳು ಪುರಾತನ ವಿಗ್ರಹಗಳು!

ಈಪೂರು: ಆಂಧ್ರಪ್ರದೇಶದ ಈಪೂರು ಗ್ರಾಮದ ಪುರಾತನ ಶ್ರೀ ಭವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯದ ವೇಳೆ ಅಚ್ಚರಿಯ ನಿಧಿಯೊಂದು (Shocking) ಪತ್ತೆಯಾಗಿದೆ. ಮಂಗಳವಾರ ರಾತ್ರಿ ದೇಗುಲದ ಆವರಣದ ಹಳೆಯ ಬಾವಿಯನ್ನು ಸ್ವಚ್ಛಗೊಳಿಸುವಾಗ, ಭಾರೀ ಗಾತ್ರದ ಕಲ್ಲುಗಳ ಅಡಿಯಲ್ಲಿ ಏಳು ಪುರಾತನ ಲೋಹದ ವಿಗ್ರಹಗಳು ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ. ದಾಳಿಕೋರರಿಂದ ರಕ್ಷಿಸಲು ಬಚ್ಚಿಟ್ಟಿದ್ದರೇ?: ಕೇವಲ ವಿಗ್ರಹಗಳಷ್ಟೇ ಅಲ್ಲದೆ, ದೇವಸ್ಥಾನದ ಮತ್ತೊಂದು ಭಾಗದಲ್ಲಿ ಮೂರು ತಾಮ್ರದ ಶಾಸನಗಳು ಸಹ ಲಭ್ಯವಾಗಿವೆ. ಈ ಹಿಂದೆ ಪರಕೀಯರ ಆಕ್ರಮಣದ ಸಮಯದಲ್ಲಿ…

Read More
cm Siddaramaiah on sringeri result accused bjp

CM Siddaramaiah: ಶೃಂಗೇರಿ ಫಲಿತಾಂಶದ ವಿರುದ್ಧ ಕಾನೂನು ಹೋರಾಟ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ (BJP) ಕುತಂತ್ರ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆಪಾದಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಫಲಿತಾಂಶದ ಹಿಂದೆ ಕ್ರಿಮಿನಲ್ ಸಂಚು ಅಡಗಿದ್ದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು. ಅರ್ಹ ಮತಗಳ ಅನರ್ಹತೆ: ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರಿಗೆ ಚಲಾವಣೆಯಾಗಿದ್ದ 255 ಅರ್ಹ ಅಂಚೆ ಮತಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ. ಮತ ಎಣಿಕೆಯ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ತನ್ನ ಪ್ರಭಾವ…

Read More
shocking 55 minor pregnant girl scanning took place

Shocking: ಮಂಡ್ಯದಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ: ಒಂದೇ ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರ ಸ್ಕ್ಯಾನಿಂಗ್!

ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ, ಮಂಡ್ಯ ನಗರದ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಕಳೆದ ಒಂದು ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರು ಗರ್ಭಿಣಿ ಸ್ಕ್ಯಾನಿಂಗ್ ಮಾಡಿಸಿಕೊಂಡಿರುವ ಗಂಭೀರ ವಿಚಾರ (Shocking) ಬಯಲಾಗಿದೆ. ಜಾಗೃತ ದಳದ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯ ವೇಳೆ ಈ ಆಘಾತಕಾರಿ ಅಂಕಿಅಂಶಗಳು ಲಭ್ಯವಾಗಿವೆ. ದಾಖಲೆಗಳ ಪರಿಶೀಲನೆ ವೇಳೆ ಸತ್ಯ ದರ್ಶನ: ಉಪ ಲೋಕಾಯುಕ್ತರ ಸೂಚನೆಯಂತೆ ಮಂಡ್ಯದ ವಿವಿಧ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ತಹಸೀಲ್ದಾರ್ ವಿಶ್ವನಾಥ್ ಮತ್ತು ಆರೋಗ್ಯ…

Read More