DK Shivakumar: ರಾಜ್ಯ ಚುನಾವಣಾ ಆಯುಕ್ತರನ್ನ ಭೇಟಿ ಮಾಡಿದ ಡಿಕೆ ಶಿವಕುಮಾರ್

DK Shivakumar meets state election commissioner

ಬೆಂಗಳೂರು: ಉಪಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತರಾದ ಜಿ.ಎಸ್. ಸಂಗ್ರೇಶಿ ಅವರನ್ನು  ಭೇಟಿ ಮಾಡಿದೆ.

ಮತದಾರ ಪಟ್ಟಿ ಪರಿಷ್ಕರಣೆ ನ್ಯಾಯಯುತವಾಗಿ ಮಾಡುವಂತೆ ಮನವಿ

ಈ ಸಮಯದಲ್ಲಿ  ಡಿ.ಕೆ. ಶಿವಕುಮಾರ್,   ಗ್ರೇಟರ್  ಬೆಂಗಳೂರು ಪ್ರಾಧಿಕಾರ ಹಾಗೂ  ಸ್ಥಳೀಯ ಸಂಸ್ಥೆಗಳ  ಚುನಾವಣೆ  ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯನ್ನು  ನ್ಯಾಯಯುತವಾಗಿ  ನಡೆಸುವಂತೆ ಮನವಿ ಸಲ್ಲಿಸಲಾಗಿದೆ . ಮತದಾರರ ಹೆಸರು ಯಾವುದೇ ಕಾರಣಕ್ಕೂ  ಪಟ್ಟಿಯಿಂದ ಬಿಟ್ಟು ಹೋಗದಂತೆ  ಎಚ್ಚರಿಕೆ ವಹಿಸಬೇಕು.  ರಾಜಕೀಯ ಪಕ್ಷಗಳ  ಬೂತ್ ಮಟ್ಟದ  ಏಜೆಂಟರೊಂದಿಗೆ ಮನೆಗಳಿಗೆ ತೆರಳಿ  ಮ್ಯಾಪಿಂಗ್ ಮಾಡುವ ಮೂಲಕ  ನ್ಯಾಯಬದ್ಧ ಮತದಾರ ಪಟ್ಟಿ ಸಿದ್ಧಪಡಿಸುವಂತೆ  ಮನವಿ ಮಾಡಲಾಗಿದೆ ಎಂದರು.

ಮನೆ ಮನೆ ಸಮೀಕ್ಷೆಗೆ ಆದ್ಯತೆ ನೀಡಿ

 ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸೇರಿದಂತೆ  ಸ್ಥಳೀಯ ಸಂಸ್ಥೆಗಳ ಚುನಾವಣೆ  ನಡೆಯಲಿರುವ ಹಿನ್ನಲೆಯಲ್ಲಿ ಯಾವುದೇ ಲೋಪ ಇಲ್ಲದಂತೆ  ಮತದಾರ ಪಟ್ಟಿ ಸಿದ್ಧಪಡಿಸಬೇಕಾಗಿದೆ. ಈ  ನಿಟ್ಟಿನಲ್ಲಿ  ಮನೆ ಮನೆ  ಸಮೀಕ್ಷೆಯ ಮೂಲಕ ಪಾರದರ್ಶಕ ಹಾಗೂ  ದೋಷಮುಕ್ತ ಪಟ್ಟಿಯನ್ನು  ಸಿದ್ಧಪಡಿಸುವುದು ಆಯೋಗದ ಆದ್ಯತೆಯಾಗಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ  ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್,  ಬೆಮೂಲ್  ಅಧ್ಯಕ್ಷ ಡಿ.ಕೆ. ಸುರೇಶ್, ಶಾಸಕರಾದ  ರಿಜ್ವಾನ್ ಅರ್ಷದ್, ಎ.ಸಿ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. 

ಇದನ್ನೂ ಓದಿ: ಪ್ರತಿಯೊಂದು ಇಲಾಖೆಯಲ್ಲೂ ದುರಾಡಳಿತ: ವಿಶ್ವೇಶ್ವರ ಹೆಗಡೆ ಕಾಗೇರಿ

Leave a Reply

Your email address will not be published. Required fields are marked *