TOP NEWS
tamil nadu dmk minister lost election by one vote

Tamil Nadu: ಕೇವಲ ಒಂದು ಮತದ ಅಂತರದಿಂದ ಸಚಿವರ ಸೋಲು: ತಿರುಪ್ಪತ್ತೂರಿನಲ್ಲಿ ‘ದೈತ್ಯ ಸಂಹಾರ’ ಮಾಡಿದ ವಿಜಯ್ ಪಕ್ಷದ ಅಭ್ಯರ್ಥಿ!

ಚೆನ್ನೈ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ತಮಿಳುನಾಡಿನ ತಿರುಪ್ಪತ್ತೂರು (Tamil Nadu) ವಿಧಾನಸಭಾ ಕ್ಷೇತ್ರದ ಫಲಿತಾಂಶವು ಜೀವಂತ ಸಾಕ್ಷಿಯಾಗಿದೆ. ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷದ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ಡಿಎಂಕೆಯ ಪ್ರಭಾವಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರನ್ನು ಕೇವಲ ಒಂದೇ ಒಂದು ಮತದ ಅಂತರದಿಂದ ಪರಾಭವಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕೊನೆಯ ಕ್ಷಣದವರೆಗೆ ಉಸಿರು ಬಿಗಿಹಿಡಿಯುವ ಕುತೂಹಲ: ಡಿಎಂಕೆಯ ಭದ್ರಕೋಟೆ ಎಂದೇ ನಂಬಲಾದ ಈ ಕ್ಷೇತ್ರದಲ್ಲಿ…

Read More
Actor thalapathy vijay father directed many sandalwood heros

Sandalwood: ಸ್ಯಾಂಡಲ್‌ವುಡ್ ದಿಗ್ಗಜರ ನೆಚ್ಚಿನ ನಿರ್ದೇಶಕ ದಳಪತಿ ವಿಜಯ್ ತಂದೆ! ಕನ್ನಡಿಗರಿಗೆ ತಿಳಿಯದ ಅಚ್ಚರಿಯ ವಿಷಯವಿದು

ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಅವರ ರಾಜಕೀಯ ಏಳಿಗೆಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಅವರ ತಂದೆ ಎಸ್.ಎ. ಚಂದ್ರಶೇಖರ್ (SAC) ಅವರು ಕನ್ನಡ ಚಿತ್ರರಂಗದ ಮೇಲೆ ಬೀರಿದ ಪ್ರಭಾವದ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ದಶಕಗಳ ಹಿಂದೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಚಿತ್ರಗಳಿಗೆ (Sandalwood) ಇವರೇ ನಿರ್ದೇಶಕರಾಗಿದ್ದರು ಎಂಬುದು ವಿಶೇಷ. ಕನ್ನಡ ಸಿನಿಮಾಗಳಲ್ಲಿ ಎಸ್‌ಎಸಿ ಹವಾ: ಎಸ್.ಎ. ಚಂದ್ರಶೇಖರ್ ಅವರು ಕೇವಲ ತಮಿಳಿಗಷ್ಟೇ ಸೀಮಿತವಾಗದೆ ಕನ್ನಡದ ಖ್ಯಾತ ನಟರಾದ ಶಂಕರ್ ನಾಗ್, ಅಂಬರೀಷ್ ಮತ್ತು…

Read More
tamil nadu election tvk vijay won in 2 constancy

Vijay: ಪೆರಂಬೂರ್ ಹಾಗೂ ಟ್ರಿಚಿ ಎರಡೂ ಕ್ಷೇತ್ರಗಳಲ್ಲಿ ವಿಜಯ್‌ಗೆ ಭರ್ಜರಿ ಗೆಲುವು!

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಕ್ಷರಶಃ ವಿಜಯ ಪತಾಕೆ ಹಾರಿಸಿದೆ. ಸ್ವತಃ ವಿಜಯ್ ಅವರು ಸ್ಪರ್ಧಿಸಿದ್ದ ಚೆನ್ನೈನ ಪೆರಂಬೂರ್ ಮತ್ತು ತಿರುಚಿರಾಪಳ್ಳಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಪತ್ಯ ಸ್ಥಾಪಿಸಿದ್ದಾರೆ. ಡಿಎಂಕೆ ಹಿಡಿತದಲ್ಲಿದ್ದ ಈ ಕ್ಷೇತ್ರಗಳಲ್ಲಿ ವಿಜಯ್ ಅವರ ಎಂಟ್ರಿ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದೆ. ಪ್ರಬಲ ಎದುರಾಳಿಗಳ ವಿರುದ್ಧ ಜಯ: ಚೆನ್ನೈನ ಪೆರಂಬೂರ್ ಕ್ಷೇತ್ರವು ದಶಕಗಳಿಂದ…

Read More
tamil nadu vijay tvk Virugambakkam candidate video viral

TVK: ಸಿನೆಮಾ ಸ್ಟೈಲ್‌ನಲ್ಲಿ ಚಾಲಕನ ಮಗ ಈಗ ಶಾಸಕ! ವಿರುಗಂಬಕ್ಕಂನಲ್ಲಿ ಡಿಎಂಕೆ ಭದ್ರಕೋಟೆ ಭೇದಿಸಿದ ವಿಜಯ್ ಆಪ್ತ ಶಬರಿನಾಥನ್

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಟ ವಿಜಯ್ ಅವರ TVK ಪಕ್ಷವು, ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನ ನೀಡುವ ಮೂಲಕ ಗಮನ ಸೆಳೆದಿದೆ. ವಿಶೇಷವಾಗಿ ವಿಜಯ್ ಅವರ ದೀರ್ಘಕಾಲದ ಚಾಲಕ ಹಾಗೂ ಆಪ್ತ ಸಹಾಯಕ ರಾಜೇಂದ್ರನ್ ಅವರ ಪುತ್ರ ಆರ್. ಶಬರಿನಾಥನ್, ಚೆನ್ನೈನ ವಿರುಗಂಬಕ್ಕಂ ಕ್ಷೇತ್ರದಲ್ಲಿ ಪ್ರಬಲ ಡಿಎಂಕೆ ಅಭ್ಯರ್ಥಿಯನ್ನು ಸೋಲಿಸಿ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಭಾವನಾತ್ಮಕ ಗೆಲುವು: ಅಭ್ಯರ್ಥಿಗಳ ಘೋಷಣೆ ಸಂದರ್ಭದಲ್ಲಿ ವಿಜಯ್ ಅವರು ಶಬರಿನಾಥನ್ ಹೆಸರನ್ನು ಪ್ರಕಟಿಸಿದಾಗ, ತಂದೆ-ಮಗ ಇಬ್ಬರೂ ವೇದಿಕೆಯ…

Read More
tamil nadu who is tvk candidate vs babu

Tamil Nadu: ಕೊಳತ್ತೂರು ಕೋಟೆಯಲ್ಲಿ ಸ್ಟಾಲಿನ್‌ಗೆ ಅನಿರೀಕ್ಷಿತ ಸೋಲು: ವಿಜಯ್ ಸಾರಥ್ಯದ ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬುಗೆ ಐತಿಹಾಸಿಕ ಜಯ!

ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭಾ ಚುನಾವಣಾ ಫಲಿತಾಂಶವು ದ್ರಾವಿಡ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ತೀವ್ರ ಹಿನ್ನಡೆಯಾಗಿದೆ. ತಮ್ಮದೇ ಭದ್ರಕೋಟೆಯಾದ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಅವರು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ 8,000ಕ್ಕೂ ಅಧಿಕ ಮತಗಳಿಂದ ಪರಾಭವಗೊಂಡಿದ್ದಾರೆ. ಈ ಫಲಿತಾಂಶ ಇಡೀ ದೇಶದ ಗಮನ ಸೆಳೆದಿದ್ದು, ವಿಜಯ್ ಅವರ ಪಕ್ಷ 110 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಬ್ಬರಿಸುತ್ತಿದೆ. ಸ್ಟಾಲಿನ್ ವಿಜಯಕ್ಕೆ ಶ್ರಮಿಸಿದ್ದ ನಾಯಕನಿಂದಲೇ…

Read More
vijay TVK rare achievement like TDP and AAP

TVK: ತಮಿಳುನಾಡು ರಾಜಕೀಯದಲ್ಲಿ ವಿಜಯ್ ಸುನಾಮಿ, ರಾಜಕೀಯದ ಹೊಸ ‘ಯೂನಿಕಾರ್ನ್’ ಟಿವಿಕೆ!

ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಶಕಗಳ ಕಾಲ ಅಧಿಪತ್ಯ ಸ್ಥಾಪಿಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ದೈತ್ಯ ಪಕ್ಷಗಳನ್ನು ಬದಿಗೆ ಸಳ್ಳಿ, ನಟ ವಿಜಯ್ (Vijay) ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಅಧಿಕಾರದ ಹತ್ತಿರಕ್ಕೆ ಬಂದಿದೆ. ಚೊಚ್ಚಲ ಚುನಾವಣೆಯಲ್ಲೇ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಛಿದ್ರಗೊಳಿಸಿರುವ ವಿಜಯ್ ಅವರ ಈ ಸಾಧನೆಯನ್ನು ರಾಜಕೀಯ ವಿಶ್ಲೇಷಕರು ‘ಬಿಗ್ ಬ್ಯಾಂಗ್’ ಕ್ಷಣ ಎಂದು ಕರೆಯುತ್ತಿದ್ದಾರೆ. ಮೊದಲ ಯತ್ನದಲ್ಲೇ ಭರ್ಜರಿ ಮುನ್ನಡೆ: ರಾಜ್ಯದ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ…

Read More
Cm Siddaramaiah social media post about kerala and tamil nadu election

CM Siddaramaiah: ಕೇರಳದಲ್ಲಿ ಕಾಂಗ್ರೆಸ್ ವಿಜಯೋತ್ಸವ: ಪಶ್ಚಿಮ ಬಂಗಾಳದ ಫಲಿತಾಂಶ ಪ್ರಜಾಪ್ರಭುತ್ವದ ಸೋಲು!: ಸಿಎಂ ಸಿದ್ದರಾಮಯ್ಯ

ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿರುವ ಎರಡು ರಾಜ್ಯಗಳ ಮತದಾರರನ್ನು ದೇಶದ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪೋಸ್ಟ್‌ ಮಾಡಿದ್ದಾರೆ. ಕೇರಳದಲ್ಲಿ ಉತ್ತಮ ಆಡಳಿತ ಕೊಡಲಿದ್ದೇವೆ ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದ ಕಾರ್ಯತಂತ್ರದ ವರೆಗೆ ಎಲ್ಲವನ್ನೂ ಆ…

Read More