PM Kisan: ರೈತರ ಖಾತೆಗೆ ನಾಳೆ ಬೀಳಲಿದೆ ಪಿಎಂ ಕಿಸಾನ್ ಹಣ
ಬೆಂಗಳೂರು: ದೇಶದ ಕೋಟ್ಯಂತರ ಅನ್ನದಾತರು ಕಾತರದಿಂದ ಕಾಯುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 20ರ ಶನಿವಾರದಂದು ಪ್ರಧಾನಮಂತ್ರಿಯವರು ದೇಶದ ಅರ್ಹ ರೈತ ಕುಟುಂಬಗಳ ಖಾತೆಗೆ ಅಧಿಕೃತವಾಗಿ ಈ ಹಣವನ್ನು ಜಮೆ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಪ್ರಧಾನಿಯವರು ಈ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದು, ಕೃಷಿ ಕ್ಷೇತ್ರಕ್ಕೆ…
