TOP NEWS
Does Indira Gandhi also urged not to buy gold as Narendra modi

Narendra Modi: ಚಿನ್ನದ ಖರೀದಿ ನಿಲ್ಲಿಸಿ ಅಂದಿದ್ದರು ಇಂದಿರಾ ಗಾಂಧಿ: ವೈರಲ್ ಆದ ಪತ್ರಿಕೆಯ ಅಸಲಿ ಸತ್ಯವೇನು?

ನವದೆಹಲಿ: ಜಾಗತಿಕ ಅನಿಶ್ಚಿತತೆ ಮತ್ತು ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಮಾಡಿದ್ದ “ಇಂಧನ ಉಳಿಸಿ ಮತ್ತು ಬಂಗಾರದ ಖರೀದಿ ಮುಂದೂಡಿ” ಎಂಬ ಮನವಿ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಡುವೆ, 1967ರ ಜೂನ್ ತಿಂಗಳ ‘ದ ಹಿಂದೂ’ ಪತ್ರಿಕೆಯ ಮುಖಪುಟದ ಚಿತ್ರವೊಂದು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಚಿನ್ನ ಖರೀದಿಸಬೇಡಿ ಎಂದು ಜನರಲ್ಲಿ ಕೋರಿದ್ದರು ಎಂಬ ವರದಿಯಿದೆ. ವೈರಲ್…

Read More
Viral news madhyapradesh high court judge comes in cycle after narendra modi statement

Viral: ಮೋದಿ ಮಾತಿಗೆ ವಿಶೇಷ ರೀತಿ ಸ್ಪಂದನೆ, ಸೈಕಲ್‌ ಏರಿ ಬಂದ ನ್ಯಾಯಾಧೀಶರು

ಮಧ್ಯಪ್ರದೇಶ: ಇಲ್ಲಿನ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಲ್ ಅವರು ಮಂಗಳವಾರ ಸೈಕಲ್ ತುಳಿಯುವ ಮೂಲಕ ನ್ಯಾಯಾಲಯಕ್ಕೆ (Viral) ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಇಂಧನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಇಂಧನ ಉಳಿತಾಯದ ಮನವಿಗೆ ಸ್ಪಂದಿಸಿ ನ್ಯಾಯಾಧೀಶರು ಈ ನಿರ್ಧಾರ ಕೈಗೊಂಡಿದ್ದಾರೆ. ಜಬಲ್‌ಪುರ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಸಿವಿಲ್ ಲೈನ್ಸ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಸುಮಾರು…

Read More
Narendra modi statement used by women to send msg to hr

Narendra Modi: “ಮೋದಿ ಹೇಳಿದ್ದಾರೆ, ನಾನು ಆಫೀಸ್‌ಗೆ ಬರಲ್ಲ”: ಪ್ರಧಾನಿ ಮನವಿಯನ್ನೇ ನೆಪವಾಗಿಸಿ WFH ಕೇಳಿದ ಯುವತಿಯ ಇಮೇಲ್ ವೈರಲ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ‘ಮಿತವ್ಯಯ’ದ ಕರೆಯನ್ನು ಯುವತಿಯೊಬ್ಬಳು ತನಗೆ ಬೇಕಾದಂತೆ ಬಳಸಿಕೊಂಡಿರುವ ರೀತಿ ಈಗ ಇಂಟರ್ನೆಟ್‌ನಲ್ಲಿ ಭಾರಿ ನಗು ಹರಿಸುತ್ತಿದೆ. ದೇಶಕ್ಕಾಗಿ ಇಂಧನ ಉಳಿಸಿ ಎಂದು ಪ್ರಧಾನಿ ಹೇಳಿದ್ದನ್ನೇ ಅಸ್ತ್ರವಾಗಿಸಿಕೊಂಡ ಸುಪ್ರಿಯಾ ಎಂಬ ಉದ್ಯೋಗಿ, ತನಗೆ 2027ರವರೆಗೆ ‘ವರ್ಕ್ ಫ್ರಮ್ ಹೋಮ್’ ಬೇಕೆಂದು ಕಂಪನಿಗೆ ಇಮೇಲ್ ಮಾಡಿದ್ದಾಳೆ. ದೇಶಪ್ರೇಮದ ಹೆಸರಲ್ಲಿ ‘ಮನೆಗೆಲಸ’ದ ಬೇಡಿಕೆ ಪಶ್ಚಿಮ ಏಷ್ಯಾದ ಯುದ್ಧದ ಭೀತಿಯಿಂದಾಗಿ ಪೆಟ್ರೋಲ್ ಉಳಿಸಲು ಪ್ರಧಾನಿ ಮೋದಿ ಜನತೆಗೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ…

Read More
modi cabinet should scarifies first not people says DK Shivakumar

DK Shivakumar: ಜನರಿಗೆ ಬುದ್ಧಿ ಹೇಳುವ ಮುನ್ನ ನಿಮ್ಮ ಸಚಿವರು ಬಸ್‌ ಹತ್ತಲಿ”: ಪ್ರಧಾನಿ ಮೋದಿಗೆ ಡಿ.ಕೆ. ಶಿವಕುಮಾರ್‌ ನೇರ ಸವಾಲು!

ಬೆಂಗಳೂರು: ಪೆಟ್ರೋಲ್‌ ಬಳಕೆ ತಗ್ಗಿಸಿ ಹಾಗೂ ಬಂಗಾರ ಕೊಳ್ಳುವುದನ್ನು ನಿಲ್ಲಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜನರ ವೈಯಕ್ತಿಕ ಬದುಕು ಮತ್ತು ಸಂಪ್ರದಾಯಗಳ ಬಗ್ಗೆ ಮಾತನಾಡುವ ಮುನ್ನ ಕೇಂದ್ರ ಸರ್ಕಾರ ವಾಸ್ತವ ನೆಲೆಗಟ್ಟಿನಲ್ಲಿ ಯೋಚಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿನ್ನದ ಮೇಲಿನ ನಿರ್ಬಂಧಕ್ಕೆ ಆಕ್ಷೇಪ ದೇಶದಲ್ಲಿ ಚಿನ್ನ ಮತ್ತು ಇಂಧನ ಬೆಲೆ ಏರಿಕೆಗೆ ಕೇಂದ್ರದ ನೀತಿಗಳೇ ಕಾರಣ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್‌,…

Read More
HD devegowda supports modi regarding his limit usage statement

HD Devegowda: ಪ್ರಧಾನಿ ಮೋದಿ ‘ಮಿತ ಬಳಕೆ’ ಕರೆಗೆ ದೇವೇಗೌಡರ ಬೆಂಬಲ: ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂದು ಕೇಂದ್ರದ ಸ್ಪಷ್ಟನೆ

ಬೆಂಗಳೂರು: ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಂದೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು (HD Devegowda) ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಭೀಕರ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮೋದಿ ಅವರು ಈ ಸಲಹೆ ನೀಡಿದ್ದಾರೆ, ಇದನ್ನು ದೇಶದ 150 ಕೋಟಿ ಜನರೂ ಪಾಲಿಸಬೇಕು ಎಂದಿದ್ದಾರೆ. ಯುದ್ಧದ ನೆರಳು ಮತ್ತು ಮಿತ (HD Devegowda) ಬಳಕೆಯ ಅಗತ್ಯ ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ…

Read More
CM Siddaramaiah tunts pm modi about his speech

CM Siddaramaiah: ಮೋದಿ ಇನ್ನೂ ಪಂಚರಾಜ್ಯಗಳ ಚುನಾವಣೆ ಗುಂಗಿನಲ್ಲಿದ್ದಾರೆ: ಸಿಎಂ ಸಿದ್ದರಾಮಯ್ಯ

ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವ್ಯಂಗ್ಯವಾಡಿದ್ದಾರೆ. ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಜನ ಪ್ರಧಾನಮಂತ್ರಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ಅವರ ಪಕ್ಷದ ದುಸ್ಥಿತಿಯಯನ್ನು ಸರಿಪಡಿಸಲಾಗದ ಅಸಹಾಯಕತೆ…

Read More
Narendra modi statement about gold created stress in market

Narendra Modi: ಮೋದಿಯವರ ‘ಚಿನ್ನ’ದ ಕರೆಗೆ ಆಭರಣ ಉದ್ಯಮ ತಲ್ಲಣ: 1 ಕೋಟಿ ಉದ್ಯೋಗಕ್ಕೆ ಸಂಚಕಾರದ ಭೀತಿ!

ನವದೆಹಲಿ: ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ “ಒಂದು ವರ್ಷ ಚಿನ್ನ ಖರೀದಿಸಬೇಡಿ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ ಸಲಹೆಯು ದೇಶದ ಜ್ಯುವೆಲ್ಲರಿ ವಲಯದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಸರ್ಕಾರದ ಈ ನಿಲುವಿನಿಂದಾಗಿ ಕೋಟ್ಯಂತರ ಕುಟುಂಬಗಳ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (GJC) ಕಳವಳ ವ್ಯಕ್ತಪಡಿಸಿದೆ. ನಿರುದ್ಯೋಗದ ಭೀತಿಯಲ್ಲಿ ಒಂದು ಕೋಟಿ ಜನ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಜೆಸಿ ಅಧ್ಯಕ್ಷ…

Read More