KRS: ವರುಣನ ಕೃಪೆಯಿಂದ ಜಲಾಶಯಗಳಿಗೆ ಜೀವಕಳೆ: ಕೆಆರ್ಎಸ್ ಒಳಹರಿವು ಹೆಚ್ಚಿದ್ರೂ ನೀರಿಗಾಗಿ ರೈತರ ‘ಚಾವಟಿ ಚಳುವಳಿ’!
ಮಂಡ್ಯ/ಶ್ರೀರಂಗಪಟ್ಟಣ: ರಾಜ್ಯದಾದ್ಯಂತ ತೀವ್ರ ಕಾಯುವಿಕೆಯ ನಂತರ ಮುಂಗಾರು ಮಳೆ ಬಿರುಸುಗೊಂಡಿದ್ದು, ಬತ್ತಿ ಹೋಗಿದ್ದ ಜಲಾಶಯಗಳಿಗೆ ಹೊಸ ಜೀವಕಳೆ ಬಂದಿದೆ. ಹಳೆ ಮೈಸೂರು ಭಾಗದ ಜೀವನಾಡಿ ಕೃಷ್ಣರಾಜಸಾಗರ (KRS) ಜಲಾಶಯಕ್ಕೆ ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಕಳೆದ ಆರು ತಿಂಗಳಿನಿಂದ ಕುಸಿದಿದ್ದ ಒಳಹರಿವು ಇದೀಗ 5,734 ಕ್ಯೂಸೆಕ್ಗೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದಾಗಿ ಡ್ಯಾಂ ನೀರಿನ ಮಟ್ಟ 82.45 ಅಡಿಗೆ ತಲುಪಿದ್ದು, ಸದ್ಯ ಕುಡಿಯುವ ನೀರು ಹಾಗೂ ನಾಲೆಗಳಿಗಾಗಿ 777 ಕ್ಯೂಸೆಕ್ ನೀರನ್ನು…
