Cyber Crime: ಡಿಜಿಟಲ್ ಅರೆಸ್ಟ್ ನೆಪದಲ್ಲಿ ಲಕ್ಷ ಲಕ್ಷ ದೋಚಿದ ವಂಚಕರು
ಬಾಗಲಕೋಟೆ: ಅಮಾಯಕರನ್ನು ಹೆದರಿಸಿ ಆನ್ಲೈನ್ ಮೂಲಕವೇ ಕೋಟ್ಯಾಂತರ ರೂಪಾಯಿ ಲೂಟಿ ಮಾಡುವ ಅಂತರರಾಜ್ಯ ಸೈಬರ್ ವಂಚಕರ (Cyber Crime) ಜಾಲಕ್ಕೆ ಬಾಗಲಕೋಟೆಯ ಹಿರಿಯ ಸರ್ಕಾರಿ ನೌಕರರೊಬ್ಬರು ಬಲಿಯಾಗಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ದಿನಗಟ್ಟಲೆ ‘ಡಿಜಿಟಲ್ ಅರೆಸ್ಟ್’ ಭೀತಿಯಲ್ಲಿಟ್ಟು, ಅವರ ಜೀವಮಾನದ ದುಡಿಮೆಯಾದ ಬರೋಬ್ಬರಿ 83.82 ಲಕ್ಷ ರೂಪಾಯಿಯನ್ನು ದೋಚಲಾಗಿದೆ. ಇಲ್ಲಿನ ಯುಕೆಪಿ (UKP) ಪುನರ್ವಸತಿ ವಿಭಾಗದ ಕಚೇರಿಯಲ್ಲಿ ಹಿರಿಯ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ 59 ವರ್ಷದ ಎಚ್.ವಿ. ಸುರೇಶ್ ರಾವ್ ಎಂಬುವವರೇ ಈ ಭೀಕರ ವಂಚನೆಗೆ…
