TOP NEWS
davanagere south mla samarth shamanur first interaction with media

Davanagere: ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ವಿಜಯೋತ್ಸವ: ಅಜ್ಜನ ಹಾದಿಯಲ್ಲೇ ಅಜಾತಶತ್ರು ಸಂಕಲ್ಪ, ಕಾಂಗ್ರೆಸ್ ಬಣ ರಾಜಕೀಯ ಚರ್ಚೆ ಚುರುಕು!

ದಾವಣಗೆರೆ: ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸುಮಾರು 7,000 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿರುವ ಸಮರ್ಥ್ ಮಲ್ಲಿಕಾರ್ಜುನ್ (ಶಾಮನೂರು), ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಜನರ ಮುಂದೆ ಬಂದಿದ್ದಾರೆ. ಅಜ್ಜ ಶಾಮನೂರು ಶಿವಶಂಕರಪ್ಪ ಅವರಂತೆಯೇ ಸರ್ವರನ್ನೂ ಪ್ರೀತಿಸುವ ‘ಅಜಾತಶತ್ರು’ ನಾಯಕನಾಗಿ ಹೊರಹೊಮ್ಮುವುದು ನನ್ನ ಆಶಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸದಾ ಲಭ್ಯವಿರುವ ಶಾಸಕ: ಕ್ಷೇತ್ರದ ಜನರ ಮೇಲೆ ಅತೀವ ವಿಶ್ವಾಸ ವ್ಯಕ್ತಪಡಿಸಿದ ಸಮರ್ಥ್, “ನನ್ನ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಜನತೆಗೆ…

Read More
by election davangere internal conflict in congress

By Election: ಸಮರ್ಥ್ ಮಲ್ಲಿಕಾರ್ಜುನ್‌ಗೆ ಜಯ; ಕಾಂಗ್ರೆಸ್ ಆಂತರಿಕ ಬಣಗಳ ನಡುವೆ ಪ್ರತಿಷ್ಠೆಯ ಸಮರ!

ದಾವಣಗೆರೆ: ದಾವಣಗೆರೆ ದಕ್ಷಿಣ (By Election) ವಿಧಾನಸಭಾ ಕ್ಷೇತ್ರದ ಉಪಸಮರದಲ್ಲಿ ಕಾಂಗ್ರೆಸ್‌ನ ಸಮರ್ಥ್ ಮಲ್ಲಿಕಾರ್ಜುನ್ ಅವರು ಸುಮಾರು 7,000 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ. ಈ ಗೆಲುವು ಕೇವಲ ಅಭ್ಯರ್ಥಿಯ ಯಶಸ್ಸಷ್ಟೇ ಅಲ್ಲದೆ, ರಾಜ್ಯ ಕಾಂಗ್ರೆಸ್ ಘಟಕದ ಪ್ರಭಾವಿ ನಾಯಕರ ನಡುವಿನ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಗಿದೆ. ರಿಜ್ವಾನ್-ಸಲೀಂ ಕಾರ್ಯತಂತ್ರಕ್ಕೆ ಯಶಸ್ಸು; ಜಮೀರ್ ಬಣಕ್ಕೆ ಮುಖಭಂಗ? ಸಮರ್ಥ್ ಅವರ ಈ ವಿಜಯವು ಶಾಸಕ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಅವರ ಬಣಕ್ಕೆ ಸಂದ ದೊಡ್ಡ ಜಯ ಎಂದು ವಿಶ್ಲೇಷಿಸಲಾಗುತ್ತಿದೆ….

Read More
Maharashtra by election ncp Sunetra pawar wins

Sunetra Pawar: ಬಾರಾಮತಿ ಉಪಸಮರದಲ್ಲಿ ಸುನೇತ್ರಾ ಪವಾರ್‌ಗೆ ಭರ್ಜರಿ ಜಯ: ಅಜಿತ್ ದಾದಾ ಭದ್ರಕೋಟೆ ಉಳಿಸಿಕೊಂಡ ಎನ್‌ಸಿಪಿ!

ಮುಂಬೈ: ಮಹಾರಾಷ್ಟ್ರ ರಾಜಕಾರಣದ ಪ್ರತಿಷ್ಠಿತ ಕಣ ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ (Sunetra Pawar) ಅವರು ಐತಿಹಾಸಿಕ ವಿಜಯ ದಾಖಲಿಸಿದ್ದಾರೆ. ತಮ್ಮ ಪತಿ, ದಿವಂಗತ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಸುನೇತ್ರಾ ಅವರು ಆರಂಭದಿಂದಲೇ ವಿರೋಧಿಗಳಿಲ್ಲದ ಅಬ್ಬರದ ಮುನ್ನಡೆ ಸಾಧಿಸುವ ಮೂಲಕ ಪವಾರ್ ಕುಟುಂಬದ ರಾಜಕೀಯ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದಾರೆ. ಅಜಿತ್ ಪವಾರ್ ಸ್ಮರಣೆ; ಭಾವುಕರಾದ ಸುನೇತ್ರಾ ಮತ ಎಣಿಕೆಯ 15ನೇ ಸುತ್ತು ಮುಕ್ತಾಯವಾಗುವಷ್ಟರಲ್ಲೇ 1.32 ಲಕ್ಷ ಮತಗಳ ಬೃಹತ್ ಅಂತರ…

Read More
DK Shivakumar about by election result

DK Shivakumar: ಗ್ಯಾರಂಟಿ ಯೋಜನೆಗಳೇ ನಮ್ಮ ಗೆಲುವಿನ ಶ್ರೀರಕ್ಷೆ: ಡಿಕೆಶಿ

ಬೆಂಗಳೂರು: ಕರ್ನಾಟಕದ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಸಾಧಿಸಿರುವ ಯಶಸ್ಸಿಗೆ ರಾಜ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳೇ ಮೂಲಕಾರಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ವಿಶ್ಲೇಷಿಸಿದ್ದಾರೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಕೇರಳದಲ್ಲಿ ಆಡಳಿತ ವಿರೋಧಿ ಅಲೆಯ ನಡುವೆ ಯುಡಿಎಫ್‌ ಮೈತ್ರಿಕೂಟ ಸಾಧಿಸಿರುವ ವಿಜಯವು ನಿರೀಕ್ಷಿತವಾಗಿತ್ತು ಎಂದು ಅಭಿಪ್ರಾಯಪಟ್ಟರು. ದಾವಣಗೆರೆ ದಕ್ಷಿಣದ ಫಲಿತಾಂಶದ ವಿಶ್ಲೇಷಣೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಗೆಲುವಿನ ಬಗ್ಗೆ ಮಾತನಾಡಿದ ಡಿಸಿಎಂ, “ಕ್ಷೇತ್ರದಲ್ಲಿ ಹಲವು ಗೊಂದಲಗಳಿದ್ದರೂ ಕಾಂಗ್ರೆಸ್‌ ಅಭ್ಯರ್ಥಿ ಸುಲಭವಾಗಿ ಗೆಲ್ಲುತ್ತಾರೆ ಎಂಬ…

Read More
bagalkot by election congress candidate umesh meti win

By Election: ಬಾಗಲಕೋಟೆ ಉಪಸಮರದಲ್ಲಿ ಕಾಂಗ್ರೆಸ್ ಗರ್ಜನೆ: ಚರಂತಿಮಠಗೆ ಸೋಲುಣಿಸಿ ‘ಕೈ’ ಹಿಡಿದ ಉಮೇಶ್ ಮೇಟಿ!

ಬಾಗಲಕೋಟೆ: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಐತಿಹಾಸಿಕ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರ ವಿರುದ್ಧ ಭರ್ಜರಿ ಪೈಪೋಟಿ ನಡೆಸಿದ ಉಮೇಶ್ ಮೇಟಿ, ಬರೋಬ್ಬರಿ 21,866 ಮತಗಳ ಬೃಹತ್ ಅಂತರದಿಂದ ವಿಜಯಶಾಲಿಯಾಗುವ ಮೂಲಕ ಬಣ್ಣದ ಲೋಕದಿಂದ ವಿಧಾನಸೌಧಕ್ಕೆ ಲಗ್ಗೆ ಇಟ್ಟಿದ್ದಾರೆ. ಮತಗಳ ಲೆಕ್ಕಾಚಾರ ಹೀಗಿದೆ: ಬಹಳ ರೋಚಕವಾಗಿ ಸಾಗಿದ ಮತ ಎಣಿಕೆಯ ಅಂತ್ಯಕ್ಕೆ ಉಮೇಶ್ ಮೇಟಿ ಅವರು ಒಟ್ಟು…

Read More
Davangere by election Samarth shyamanuru wins

By Election: ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಮೊಮ್ಮಗನ ಭರ್ಜರಿ ಎಂಟ್ರಿ: ಬಿಜೆಪಿಗೆ ಶಾಕ್ ನೀಡಿದ ಸಮರ್ಥ್!

ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ (By Election) ಸಮರ್ಥ್ ಶಾಮನೂರು ಭರ್ಜರಿ ಜಯ ದಾಖಲಿಸಿದ್ದಾರೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಈ ಗೆಲುವಿನ ಮೂಲಕ ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಪಾರುಪತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜಯದ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದ ಮುಂದೆ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಸೋಲಿನ ಭೀತಿಯಿಂದ ಗೆಲುವಿನ ನಗೆಯತ್ತ: ರೋಚಕ ಮತ…

Read More
Dk shivakumar talks about by election result

DK Shivakumar: ತಮಿಳುನಾಡು ಫಲಿತಾಂಶ ಅಚ್ಚರಿ ತಂದಿದೆ, ಅಲ್ಲಿ ಹೊಸ ಯುಗಾರಂಭ: ಡಿ.ಕೆ. ಶಿವಕುಮಾರ್

ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಹಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮಿಳುನಾಡು ಚುನಾವಣಾ ಫಲಿತಾಂಶವು ತಮಗೆ ಅಚ್ಚರಿ ಮೂಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡಿನಲ್ಲಿ (DK Shivakumar) ಹೊಸ ಯುಗಾರಂಭ “ತಮಿಳುನಾಡು ಫಲಿತಾಂಶವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಅಲ್ಲಿ 30-40% ರಷ್ಟು ಮತಗಳು ಬೇರೆಡೆ ಹೋಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಈ ಪ್ರಮಾಣದಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಅಲ್ಲಿ ನಿಜಕ್ಕೂ ಒಂದು ಹೊಸ ಯುಗ…

Read More