Crime: ಅನೈತಿಕ ಸಂಬಂಧ ಕೊಲೆಗೆ ಸ್ಕೆಚ್‌, ಖ್ಯಾತ ಜ್ಯೋತಿಷಿ ಅರೆಸ್ಟ್‌

Crime astrologer kamalakar bhatt arrested

ಕಾರವಾರ: ಮಹಿಳೆಯ ಜೊತೆ ಅನೈತಿಕ (Crime) ಸಂಬಂಧದ ವಿಚಾರವಾಗಿ ಖ್ಯಾತಿ ಜ್ಯೋತಿಷಿ ಕಮಲಾಕರ್​ ಭಟ್ (Kamalakar Bhatt) ಅವರನ್ನ ಪೊಲೀಸರು ಬಂಧನ ಮಾಡಿದ್ದಾರೆ.

ಗಂಡನ ಕೊಲೆಗೆ ಸ್ಕೆಚ್‌ ಹಾಕಿದ್ದ ಮಹಿಳೆ

ಮಾಹಿತಿಗಳ ಪ್ರಕಾರ, ಮಹಿಳೆಯ ಜೊತೆ ಕಮಲಾಕರ್​ ಭಟ್ ಅವರಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧಕ್ಕೆ ಮಹಿಳೆಯ ಪತಿ ಅಡ್ಡಿ ಆಗಿದ್ದ, ಹಾಗಾಗಿ ಗಂಡನನ್ನ ಕೊಲೆ ಮಾಡಲು ಆ ಮಹಿಳೆ ಪ್ಕ್ಯಾನ್‌ ಮಾಡಿದ್ದಳು. ಆದರೆ ಈ ಪ್ಲ್ಯಾನ್‌ ಉಲ್ಟಾ ಹೊಡೆದಿದ್ದು, ಗಂಡನ ಬದಲು ಆತನನ್ನ ಪಾರು ಮಾಡಲು ಹೋದ ಅಣ್ಣ ಕೊಲೆ ಆಗಿದ್ದಾನೆ. ಈ ಪ್ರಕರಣದಲ್ಲಿ ಕಮಲಾಕರ್‌ ಭಟ್‌ ಹೆಸರು ಕೇಳಿ ಬಂದಿದ್ದು, ಸದ್ಯ ಪೊಲೀಸರು ಅವರನ್ನ ಬಂಧಿಸಿದ್ದಾರೆ.

ಏನಿದು ಪ್ರಕರಣ?

ಜ್ಯೋತಿಷಿ ಕಮಲಾಕರ್​ ಭಟ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮಹೇಶ್ ನಾಯ್ಕ್ ಎನ್ನುವ ವ್ಯಕ್ತಿಯ ಪತ್ನಿ ಸುಚಿತ್ರಾ ಎಂಬಾಕೆಯ ಜೊತೆ  ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಚಾರ ತಿಳಿದ ಪತಿ ಮಹೇಶ್‌, ಪತ್ನಿಯನ್ನ ಪ್ರಶ್ನೆ ಮಾಡಿದ್ದ. ತಮ್ಮ ಸಂಬಂಧಕ್ಕೆ ಗಂಡ ಅಡ್ಡಿ ಆಗುತ್ತಿದ್ದಾನೆ ಎಂದು ಪತ್ನಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್​ ಭಟ್ ಸೇರಿದಂತೆ ಕೆಲವರು  ಮಹೇಶ್‌ನನ್ನ ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದಾರೆ. ಆದರೆ ಈ ಪ್ಕ್ಯಾನ್‌ ಸರಿಯಾಗಿ ಕೆಲಸ ಮಾಡದೇ ಮಿಸ್‌ ಆಗಿದೆ. ಮಹೇಶ್‌ ನಾಯ್ಕ್‌ ಮಿಸ್‌ ಆಗಿದ್ದು, ಆದರೆ ಆತನ ಸಹೋದರ ವಸಂತ್‌ ನಾಯ್ಕ್‌ ಈ ಸಂಚಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾನೆ.  

ಹೌದು, ಪತ್ನಿ ಸುಚಿತ್ರಾ ಕಳುಹಿಸಿದ್ದ ಕೊಲೆಗಾರರ ಗ್ಯಾಂಗ್‌ ಸಡನ್‌ ಆಗಿ ಮಹೇಶ್‌ ನಾಯ್ಕ್‌ ಅವರ ಮೇಲೆ ಹಲ್ಲೆ ಮಾಡಿತ್ತು. ಈ ವಿಚಾರ ತಿಳಿದ ತಕ್ಷಣ ಸಹೋದರ ವಸಂತ್‌ ನಾಯ್ಕ್‌ ತಮ್ಮನನ್ನ ಕಾಪಾಡಲು ಬಂದಿದ್ದಾರೆ. ಈ ಸಮಯದಲ್ಲಿ ಗಲಾಟೆ ಆಗಿದೆ. ಆದರೆ ಅದೃಷ್ಟವಶಾತ್‌ ಮಹೇಶ್‌ ಬಚಾವ್‌ ಆಗಿದ್ದು, ಅಣ್ಣ ವಸಂತ್‌ ಕೊಲೆ ಆಗಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್‌ ಪತ್ನಿ ಆರೋಪಿ ಮಹಿಳೆ ಸುಚಿತ್ರಾ, ಸುಚಿತ್ರಾಳ ತಂದೆ ಲೋಕನಾಥ್​, ಕಮಲಾಕರ ಸ್ವಾಮಿ ಭಟ್ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕಾರಿನಿಂದ ಮಹಿಳೆಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ಭೂಪ ಅರೆಸ್ಟ್

Leave a Reply

Your email address will not be published. Required fields are marked *