Tamil Nadu: ತಮಿಳುನಾಡು ಅಸೆಂಬ್ಲಿಯಲ್ಲಿ ‘ವಿಜಯ್ ವರ್ಸಸ್ ಉದಯನಿಧಿ’ ಕದನ: ರಾಜಕೀಯ ಜಿದ್ದಾಜಿದ್ದಿಗೆ ಕೌಟುಂಬಿಕ ಕೋರ್ಟ್ ಟ್ವಿಸ್ಟ್
ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭೆಯು ಇದೀಗ ಇಬ್ಬರು ಯುವ ರಾಜಕೀಯ ನಾಯಕರ ತೀರಾ ವೈಯಕ್ತಿಕ ಮಟ್ಟದ ವಾಗ್ದಾಳಿಗೆ ವೇದಿಕೆಯಾಗಿದೆ. ಮುಖ್ಯಮಂತ್ರಿ ವಿಜಯ್ ಹಾಗೂ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನಡುವಿನ ರಾಜಕೀಯ ಸಮರ ಹದ್ದುಮೀರಿದ್ದು, ಪರಸ್ಪರರ ಖಾಸಗಿ ಬದುಕನ್ನು ಅಸೆಂಬ್ಲಿಯಲ್ಲೇ ಕೆದಕುವ ಹಂತಕ್ಕೆ ತಲುಪಿದೆ. ಸದನದಲ್ಲಿ ಸಿಎಂ ವಿಜಯ್ ಮಾಡಿದ ಭಾಷಣಕ್ಕೆ ಕೌಂಟರ್ ಕೊಡುವ ನೆಪದಲ್ಲಿ ಉದಯನಿಧಿ ಅವರು, ವಿಜಯ್ ಅವರ ವೈವಾಹಿಕ ಜೀವನದ ವಿಚ್ಛೇದನ ಪ್ರಕರಣವನ್ನು ಎಳೆದು ತಂದು ಭಾರಿ ಸಂಚಲನ ಮೂಡಿಸಿದ್ದಾರೆ. ವಿಜಯ್…
