Sheikh Hasina: ಮರಣದಂಡನೆ ತೀರ್ಪಿನ ಬೆನ್ನಲ್ಲೇ ಶೇಖ್ ಹಸೀನಾ ದಿಟ್ಟ ಘೋಷಣೆ: ಜೈಲಿಗೆ ಹಾಕಿದರೂ, ಕೊಂದರೂ ಡಿಸೆಂಬರ್ನಲ್ಲಿ ಬಾಂಗ್ಲಾಕ್ಕೆ ಮರಳುವುದಾಗಿ ಭರವಸೆ!
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಭೀಕರ ವಿದ್ಯಾರ್ಥಿ ದಂಗೆಯ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ ತಾವು ಮತ್ತು ದೇಶ ತೊರೆದಿರುವ ಅವಾಮಿ ಲೀಗ್ ಪಕ್ಷದ ಪ್ರಮುಖ ನಾಯಕರು ಸ್ವದೇಶಕ್ಕೆ ವಾಪಸ್ ಆಗಲಿದ್ದೇವೆ ಎಂದು ಪ್ರಕಟಿಸಿದ್ದಾರೆ. “ನಾನು ಬಾಂಗ್ಲಾ ಮಣ್ಣಿಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಜೈಲಿಗಟ್ಟಬಹುದು ಅಥವಾ ಹತ್ಯೆ ಮಾಡಬಹುದು ಎಂಬ ಕಟು ಸತ್ಯ ನನಗೆ ತಿಳಿದಿದೆ. ಆದರೂ ನಾನು ತಾಯ್ನಾಡಿಗೆ…
