Rain; ಕರ್ನಾಟಕದಲ್ಲಿ ಮುಂಗಾರು ಏರುಪೇರು: ಜುಲೈ ಆರಂಭವಾದ್ರೂ 17 ಜಿಲ್ಲೆಗಳು, 129 ತಾಲ್ಲೂಕುಗಳಲ್ಲಿ ಮಳೆ ಕೊರತೆ ಭೀತಿ!
ಬೆಂಗಳೂರು: ರಾಜ್ಯದಲ್ಲಿ ಜುಲೈ ಮೊದಲ ವಾರದಿಂದ ಮುಂಗಾರು ಮಳೆ ಕೊಂಚ ಚುರುಕುಗೊಂಡು ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರೂ, ಒಟ್ಟಾರೆ ಮಳೆಯ (Rain) ಹಂಚಿಕೆ ಮಾತ್ರ ಆತಂಕಕಾರಿಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಜೂನ್ 1ರಿಂದ ಜುಲೈ 6ರವರೆಗಿನ ಐದು ವಾರಗಳ ಅಧಿಕೃತ ವರದಿಯ ಪ್ರಕಾರ, ರಾಜ್ಯದ 17 ಜಿಲ್ಲೆಗಳಲ್ಲಿ ಇಂದಿಗೂ ಸಕಾಲಕ್ಕೆ ಮಳೆಯಾಗಿಲ್ಲ. ಪರಿಣಾಮವಾಗಿ ಬರೋಬ್ಬರಿ 129 ತಾಲ್ಲೂಕುಗಳು ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸೂಕ್ತ ಮಳೆಯಿಲ್ಲದೆ ಕಂಗಾಲಾಗಿವೆ. ವಿಜಯನಗರದಲ್ಲಿ ಅತ್ಯಂತ ಕಡಿಮೆ ಮಳೆ;…
