Koppal: ಶಾಸಕ ಹಿಟ್ನಾಳ್ ಸಚಿವ ಸ್ಥಾನದ ಹೋರಾಟಕ್ಕೆ ಹಣದ ಕಳಂಕ: ಪ್ರತಿಭಟನೆಗೆ ಜನರನ್ನು ಕರೆತರಲು ದುಡ್ಡು ಹಂಚಿದ ಕಾಂಗ್ರೆಸ್ ಮುಖಂಡರು
ಕೊಪ್ಪಳ: ಸತತವಾಗಿ ಮೂರನೇ ಬಾರಿಗೆ ಶಾಸಕರಾಗಿ ವಿಜಯಶಾಲಿಯಾಗಿರುವ ರಾಘವೇಂದ್ರ ಹಿಟ್ನಾಳ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕೊಪ್ಪಳದಲ್ಲಿ (Koppal) ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯು ಈಗ ದೊಡ್ಡ ವಿವಾದದ ಸ್ವರೂಪ ಪಡೆದುಕೊಂಡಿದೆ. ತಮ್ಮ ನೆಚ್ಚಿನ ನಾಯಕನಿಗೆ ಸಚಿವ ಸ್ಥಾನ ಸಿಗಲೇಬೇಕು ಎಂದು ಆಗ್ರಹಿಸಿ ಸ್ಥಳೀಯ ನಾಯಕರು ಹಮ್ಮಿಕೊಂಡಿದ್ದ ಈ ಹೋರಾಟಕ್ಕೆ ಜನರನ್ನು ಸೆಳೆಯಲು ಬಹಿರಂಗವಾಗಿಯೇ ಹಣದ ಆಮಿಷ ಒಡ್ಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ…
