Encounter: ರಾಜೌರಿ ಅರಣ್ಯದಲ್ಲಿ ಉಗ್ರರ ವಿರುದ್ಧ ಭೀಕರ ಜಂಟಿ ಕಾರ್ಯಾಚರಣೆ: ಸೇನೆಯ ಸರಣಿ ಭೇಟೆಗೆ ನಲುಗಿದ ಭಯೋತ್ಪಾದಕ ಜಾಲ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ದೊರಿಮಾಲ್ ಅರಣ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭೀಕರ (Encounter) ಗುಂಡಿನ ಚಕಮಕಿ ಆರಂಭವಾಗಿದೆ. ದಟ್ಟವಾದ ಕಾಡಿನೊಳಗೆ ಕನಿಷ್ಠ ಇಬ್ಬರಿಂದ ಮೂವರು ಪಾಕಿಸ್ತಾನಿ ಉಗ್ರರು ಅಡಗಿಕುಳಿತಿದ್ದು, ಸದ್ಯ ಅವರನ್ನು ಸೇನಾ ಪಡೆಗಳು ಯಶಸ್ವಿಯಾಗಿ ಸುತ್ತುವರೆದಿವೆ ಎಂದು ವರದಿಯಾಗಿದೆ. ಅರಣ್ಯ ಭಾಗದಲ್ಲಿ ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ತಕ್ಷಣವೇ ಜಂಟಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದವು. ಈ ವೇಳೆ ಅಡಗಿದ್ದ…
