Bidadi Township: ಬಿಡದಿ ಸ್ಮಾರ್ಟ್ ಟೌನ್ಶಿಪ್ ವಿವಾದಕ್ಕೆ ಆಣೆ-ಪ್ರಮಾಣದ ಟ್ವಿಸ್ಟ್: ಕುಮಾರಸ್ವಾಮಿಗೆ ಧರ್ಮಸ್ಥಳ ಸವಾಲು ಹಾಕಿದ ಶಾಸಕ ಎಚ್.ಸಿ. ಬಾಲಕೃಷ್ಣ!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಸ್ಮಾರ್ಟ್ ಟೌನ್ಶಿಪ್ (Bidadi Township) ಯೋಜನೆಯ ಸುತ್ತಲಿನ ರಾಜಕೀಯ ಜಿದ್ದಾಜಿದ್ದಿ ಇದೀಗ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಪತ್ರ ಸಮರ ಮತ್ತು ಸವಾಲುಗಳ ಬೆನ್ನಲ್ಲೇ, ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಜೆಡಿಎಸ್ ನಾಯಕನಿಗೆ ಹೊಸ ಸವಾಲೊಂದನ್ನು ಎಸೆದಿದ್ದಾರೆ. ಬಿಡದಿ ಟೌನ್ಶಿಪ್ ನಿಮ್ಮದೇ ಕನಸಿನ ಕೂಸು ಹೌದೋ ಅಲ್ವೋ ಎಂಬುದನ್ನು ಧರ್ಮಸ್ಥಳದ ಮಂಜುನಾಥ…
