BJP: ವಿಧಾನಪರಿಷತ್ ಚುನಾವಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ಸ್ಫೋಟ; ಹೈಕಮಾಂಡ್ ಕೋಪಕ್ಕೆ ಗುರಿಯಾದರೇ ವಿಜಯೇಂದ್ರ?
ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಯಲ್ಲಿ ತೀವ್ರ ರಾಜಕೀಯ ವಿಪ್ಲವ ಆರಂಭವಾಗಿದೆ. ಮೈತ್ರಿಕೂಟದ ಶಾಸಕರು ನಡೆಸಿದ್ದಾರೆನ್ನಲಾದ ಅಡ್ಡ ಮತದಾನವು (Cross Voting) ಕಮಲ (BJP) ಪಾಳಯಕ್ಕೆ ಭಾರಿ ಮುಜುಗರ ತಂದಿಟ್ಟಿದೆ. ಇದರ ನೇರ ಪರಿಣಾಮ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹುದ್ದೆಯ ಮೇಲಾಗುವ ಮುನ್ಸೂಚನೆ ಸಿಕ್ಕಿದ್ದು, ಅವರ ನಾಯಕತ್ವದ ಭವಿಷ್ಯ ಈಗ ದೆಹಲಿ ವರಿಷ್ಠರ ಕೈಯಲ್ಲಿದೆ. ರಾಜ್ಯ ಘಟಕದ ಈ ಗೊಂದಲ ಹಾಗೂ ಶಿಸ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ…
