Crime: ಕೆ.ಆರ್. ಪುರಂ ಟ್ರಿಪಲ್ ಮರ್ಡರ್ ಕೇಸ್: ಆಸ್ತಿ ಮತ್ತು 30 ಲಕ್ಷ ಸಾಲದ ವಿವಾದಕ್ಕೆ ಹೆತ್ತವರನ್ನೇ ಬಲಿ ಪಡೆದ ಲಿವ್-ಇನ್ ಜೋಡಿ
ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ವ್ಯಾಪ್ತಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕೃತ್ಯದ ಸಣ್ಣ ಎಳೆಯನ್ನು (Crime) ಪೊಲೀಸರು ಬಿಚ್ಚಿಟ್ಟಿದ್ದಾರೆ. ಆರೋಪಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಹೊಂದಿದ್ದ ಲಕ್ಷಾಂತರ ರೂಪಾಯಿ ಸಾಲ ಮತ್ತು ಆಸ್ತಿಯ ಜಗಳವೇ ಈ ರಕ್ತಪಾತಕ್ಕೆ ಪ್ರಮುಖ ಪ್ರೇರಣೆ ಎಂಬ ಅಂಶ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಪೋಷಕರು ಹಣಕಾಸಿನ ನೆರವು ನೀಡದ ಕೋಪಕ್ಕೆ ಇಡೀ ಕುಟುಂಬವನ್ನೇ ಮುಗಿಸಲಾಗಿದೆ ಎಂದು ಶಂಕಿಸಲಾಗಿದೆ. ಹೆತ್ತವರ ನಿರಾಕರಣೆಯೇ…
