ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಮಸೂದೆಗಳನ್ನ ಜಾರಿ ಮಾಡಿದೆ. ಇದೀಗ ಉದ್ಯೋಗಿಗಳ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಹೊಸ ಮಸೂದೆಯನ್ನ( Right to Disconnect Bill) ಮಂಡನೆ ಮಾಡಿದೆ.
ಏನಿದು ಹೊಸ ಮಸೂದೆ?
ಭಾರತದಲ್ಲಿ ಕೆಲಸ ಮತ್ತು ಖಾಸಗಿ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಲು ಬಹಳ ಕಷ್ಟವಾಗುತ್ತಿದೆ ಎನ್ನುವ ಚರ್ಚೆ ಕಳೆದ ಕೆಲ ಸಮಯದಿಂದ ಆರಂಭವಾಗಿದೆ. ಉದ್ಯೋಗಿಗಳಿಗೆ ಬಹಳ ಒತ್ತಡ ಆಗುತ್ತಿದೆ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎನ್ನುವ ಮಾತು ಸಹ ಕೇಳಿ ಬಂದಿದ್ದವು, ಇದೀಗ ಆಫೀಸ್ ಸಮಯ ಮುಗಿದ ನಂತರ ಫೋನ್ ಕರೆಗಳು, ಇಮೇಲ್ಗಳು ಮತ್ತು ವರ್ಕ್ ಮೆಸೇಜ್ಗಳಿಂದ ಮುಕ್ತಿ ನೀಡುವ ಉದ್ದೇಶದಿಂದ ರೈಟ್ ಟು ಡಿಸ್ಕನೆಕ್ಟ್ ಬಿಲ್ 2025 (Right to Disconnect Bill2025) ಅನ್ನು ಮಂಡನೆ ಮಾಡಲಾಗಿದೆ.
ಲೋಕಸಭೆಯಲ್ಲಿ ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಅವರು “ರೈಟ್ ಟು ಡಿಸ್ಕನೆಕ್ಟ್ ಬಿಲ್ 2025” ಬಿಲ್ ಅನ್ನು ಮಂಡನೆ ಮಾಡಿದ್ದು, ಈ ಬಿಲ್ ಪ್ರಕಾರ ನೌಕರರಿಗೆ ಅಧಿಕೃತ ಕೆಲಸದ ಅವಧಿಯ ನಂತರ ಫೋನ್ಕಾಲ್ಗಳು ಮತ್ತು ಇಮೇಲ್ಗಳಿಗೆ ಪ್ರತಿಕ್ರಿಯಿಸದೆ ಇರುವ ಹಕ್ಕನ್ನ ಉದ್ಯೋಗಿಗಳಿಗೆ ನೀಡಲಾಗುತ್ತದೆ.
ಉದ್ಯೋಗಿಗಳ ರಕ್ಷಣೆಗೆ ಈ ಬಿಲ್
ಈ ಬಿಲ್ನಲ್ಲಿ ಉದ್ಯೋಗಿಗಳ ಕಲ್ಯಾಣ ಪ್ರಾಧಿಕಾರ ಸ್ಥಾಪಿಸುವ ಪ್ರಸ್ತಾಪ ಸಹ ಮಾಡಲಾಗಿದ್ದು, ಇದು ಕೆಲಸದ ಸಮಯ ಮುಗಿದ ನಂತರ ಸಹ ಸಂಪರ್ಕ ಮಾಡುವಂತೆ ಒತ್ತಾಯ ಹೇರುತ್ತಿದ್ದರೆ ಅಥವಾ ಅದಕ್ಕೆ ಸಂಬಂಧಪಟ್ಟ ದೂರುಗಳನ್ನ ಪರಿಹರಿಸುತ್ತದೆ ಎನ್ನಲಾಗಿದೆ. ಈ ಕಾನೂನು ಜಾರಿಯಾದರೆ ಭಾರತವು ಫ್ರಾನ್ಸ್, ಬೆಲ್ಜಿಯಂ, ಇಟಲಿ ನಂತಹ ದೇಶಗಳ ಸಾಲಿಗೆ ಸೇರಲಿದೆ.
ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡಲು ರಷ್ಯಾ-ಭಾರತ ಸಿದ್ಧ
