TOP NEWS
Weekly Horoscope from February 8 to 13 2026

Weekly Horoscope: ಒಂದು ವಾರ ನಿರೀಕ್ಷಿತ ಫಲ ಸಿಗುತ್ತೆ, ಆರೋಗ್ಯದ ಬಗ್ಗೆ ಗಮನ ಇರಲಿ

ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರ ಫೆಬ್ರವರಿ 8 ರಿಂದ ಫೆಬ್ರವರಿ 13 ರ ವರೆಗಿನ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ ಮೇಷ ರಾಶಿ: ಈ ರಾಶಿಯ ಜನರು ಎಲ್ಲಾ ವಿಷಯಗಳಲ್ಲಿ ಬಹಳಷ್ಟು ಅನುಕೂಲಕರ ವಿಷಯಗಳನ್ನು ಹೊಂದಿರುತ್ತಾರೆ. ಹಿಂದಿನ ದಿನ ಶನಿಯ ಪ್ರಭಾವವು ಬಹಳ…

Read More
Atomic Energy development increased in india says minister Jitendra Singh

Jitendra Singh: ದೇಶದಲ್ಲಿ ಡಬಲ್‌ ಆದ ಪರಮಾಣು ಇಂಧನ ಸಾಮರ್ಥ್ಯ

ನವದೆಹಲಿ: ಕಳೆದ 11 ವರ್ಷಗಳಲ್ಲಿ ದೇಶದ ಪರಮಾಣು ಇಂಧನ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದ್ದು, 2032ರ ವೇಳೆಗೆ ಮೂರು ಪಟ್ಟು ಹೆಚ್ಚಿಸುವ ಗುರಿ ಇದೆ ಎಂದು ಅಣುಶಕ್ತಿ, ಬಾಹ್ಯಾಕಾಶ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ (Jitendra Singh) ರಾಜ್ಯಸಭೆಗೆ ತಿಳಿಸಿದ್ದಾರೆ. ಪರಮಾಣು ರಿಯಾಕ್ಟರ್ ಸಾಮರ್ಥ್ಯ ಹೆಚ್ಚು  ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು,  2014ರಲ್ಲಿ ದೇಶದ ಪರಮಾಣು ರಿಯಾಕ್ಟರ್ ಸಾಮರ್ಥ್ಯ 4 ಸಾವಿರದ 780 ಮೆಗಾವ್ಯಾಟ್ ನಷ್ಟಿದ್ದು, ಇದೀಗ 8 ಸಾವಿರದ…

Read More
HD Kumaraswamy on reopening bhadravati iron factory

HD Kumaraswamy: ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರದಿಂದ ಹಣ: ಎಚ್‌ಡಿ ಕುಮಾರಸ್ವಾಮಿ

ಮೈಸೂರು: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕಾಗಿ 4 ಸಾವಿರದ 500 ರಿಂದ 5 ಸಾವಿರ ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ. ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಮೈಸೂರಿನಲ್ಲಿ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025-2027ರ ಕೇಂದ್ರ ಬಜೆಟ್‌ನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್…

Read More
problem for minister RB Timmapura and his son

RB Timmapura: ಅಬಕಾರಿ ಸಚಿವರಿಗೆ ಸಂಕಷ್ಟ, ಅಧಿಕಾರಿಗಳ ಜೊತೆ ಸೇರಿ ಅಕ್ರಮ ಆರೋಪ

ಬೆಂಗಳೂರು: ಅಬಕಾರಿ ಸಚಿವ ಆರ್ ಬಿ‌ ತಿಮ್ಮಾಪುರ‌ (RB Timmapura) ಹಾಗೂ ಪುತ್ರನ ಮೇಲೆ ಅಕ್ರಮ ಆರೋಪ ಕೇಳಿಬಂದಿದ್ದು, ತಂದೆ ಮಗನಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗುತ್ತಿದೆ. ಅಧಿಕಾರಿಗಳ ಜೊತೆ ಸೇರಿ ಅಕ್ರಮ ಮಾಹಿತಿಗಳ ಪ್ರಕಾರ, ಅಧಿಕಾರಿಗಳ ಜೊತೆಗೆ ಸೇರಿ ಅಕ್ರಮ ಮಾಡಿರುವ ಆರೋಪ ಕೇಳಿಬಂದಿದ್ದು, ಸಚಿವ ತಿಮ್ಮಾಪುರ ಮತ್ತು ಪುತ್ರನಿಗೆ, ಅಧಿಕಾರಿಗಳ ಆಡಿಯೋ ಸಂಕಷ್ಟ ತಂದಿದೆ.  ಸಿಎಲ್-7 ಸನ್ನದು ಮಂಜೂರು ಮಾಡುವ ಕುರಿತ ಆಡಿಯೋ ಒಂದು ವೈರಲ್ ಆಗುತ್ತಿದ್ದು, ಆಡಿಯೋದಲ್ಲಿನ ಸಂಭಾಷಣೆಯಲ್ಲಿ‌ ತಿಮ್ಮಾಪುರ ಪುತ್ರರ ಹೆಸರು ಬಳಕೆ…

Read More
Horror Punjab Woman body found in iron trunk

Horror: 99ರ ವೃದ್ಧೆಯ ಬರ್ಬರ ಹತ್ಯೆ, ಟ್ರಂಕ್‌ನಲ್ಲಿ ಪತ್ತೆಯಾದ ದೇಹ

ಹೋಶಿಯಾರ್‌ಪುರ: 99 ವರ್ಷದ ವೃದ್ಧೆಯೊಬ್ಬಳನ್ನು ದರೋಡೆಕೋರನೊಬ್ಬ ಕೊಲೆ (Horror) ಮಾಡಿ, ಆಕೆಯ ದೇಹವನ್ನು ಕಬ್ಬಿಣದ ಟ್ರಂಕಿನೊಳಗೆ ತುಂಬಿಸಿರುವ ಘಟನೆ ಹೋಶಿಯಾರ್‌ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆ ಪೊಲೀಸರ ಮಾಹಿತಿ ಪ್ರಕಾರ, ಮೃತ ವೃದ್ಧೆಯನ್ನ ಜೋಗಿಂದರ್ ಕೌರ್ ಎಂದು ಗುರುತಿಸಲಾಗಿದೆ. ಇನ್ನು ಚಬ್ಬೇವಾಲ್ ಪ್ರದೇಶದ ಭಾಮ್ ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ವೃದ್ಧೆ ಒಂಟಿಯಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದ್ದು,  ಹಿಂದಿನ ಬುಧವಾರ ಸಂಜೆ ಆಕೆಯ ಶವ ಪತ್ತೆಯಾಗಿದ್ದು, ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು…

Read More
Minister Jai Shankar meeting with Saudi leaders

Jai Shankar: ಸೌದಿ ಅರೆಬಿಯಾ ನಾಯಕರ ಜೊತೆ ಸಚಿವ ಜೈಶಂಕರ್‌ ಸಭೆ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಸೇರಿದಂತೆ ಪ್ರಾದೇಶಿಕ ಪರಿಸ್ಥಿತಿ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, (Jai Shankar) ಸೌದಿ ಅರೆಬಿಯಾ ಹಾಗೂ ಯುಎಇ ಸಹವರ್ತಿಗಳೊಂದಿಗೆ ಸಮಾಲೋಚನೆ ಮಾಡಿದ್ದಾರೆ. ಯಾವೆಲ್ಲಾ ನಾಯಕರ ಜೊತೆ ಚರ್ಚೆ?  ಸೌದಿಅರೆಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಪರ್ಹಾನ್ ಹಾಗೂ ಯುಎಇನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಹೇದ್ ಅಲ್ ನಹ್ಯಾನ್ ಅವರೊಂದಿಗೆ ಚರ್ಚೆ ನಡೆಸಿದರು.  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ…

Read More
BJP BY Vijayendra on union budget 2026

BY Vijayendra: ಕೇಂದ್ರ ಬಜೆಟ್‌ ರೈತರಿಗೆ ಸಹಾಯವಾಗಲಿದೆ: ಬಿವೈ ವಿಜಯೇಂದ್ರ

ಶಿವಮೊಗ್ಗ:  ಕೇಂದ್ರ ಸರ್ಕಾರ ತೆಂಗಿನ ಬೆಳೆಗಾರರು ಗೋಡಂಬಿ, ಕೋಕೋ, ಮೀನುಗಾರಿಕೆ ಮತ್ತು ಶ್ರೀಗಂಧ ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿರುವುದು ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ರಾಜ್ಯದ ರೈತರಿಗೆ ಸಹಾಯಕ ಆಗಲಿದೆ ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜ್ಯದ ರೈತರಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ಕರ್ನಾಟಕದ ತೆರಿಗೆ ಪಾಲು ಶೇಕಡಾ 3.65 ರಿಂದ ಶೇಕಡಾ 4.14 ಕ್ಕೆ ಏರಿಕೆಯಾಗಿದೆ. ಇದರಿಂದ ರಾಜ್ಯಕ್ಕೆ ಪ್ರತಿ ವರ್ಷ ಹೆಚ್ಚುವರಿಯಾಗಿ 7 ಸಾವಿರದ 387…

Read More