TOP NEWS
CM Siddaramaiah announces 5 lakh compensation

CM Siddaramaiah: ಹುಲಿಕಲ್‌ ಘಾಟ್‌ ಮಣ್ಣು ಕುಸಿತ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

ಬೆಂಗಳೂರು: ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಸಮಯದಲ್ಲಿ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವಿಗೀಡಾಗಿರುವ ಘಟನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಬೇಸರ ವ್ಯಕ್ತಪಡಿಸಿದ್ದಾರೆ. ಸುದ್ದಿ ಕೇಳಿ ಬಹಳ ದುಃಖವಾಯಿತು ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅವರು, ನನಗೆ ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ‌ ದುಃಖವಾಯಿತು. ಮೃತ ದುರ್ದೈವಿ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು…

Read More
davangere and bagalkote by election voting percentage information

By Election: ದಾವಣಗೆರೆ-ಬಾಗಲಕೋಟೆ ಉಪಚುನಾವಣೆ, ಮತದಾರರಿಂದ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (By Election) ಮತದಾನ ಪ್ರಕ್ರಿಯೆ ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಬಾಗಲಕೋಟೆಯಲ್ಲಿ ಶೇ. 54.82 ಹಾಗೂ ದಾವಣಗೆರೆಯಲ್ಲಿ ಶೇ. 49.66 ರಷ್ಟು ದಾಖಲೆ ಪ್ರಮಾಣದ ಮತದಾನವಾಗಿದೆ. ಆರಂಭದಲ್ಲಿ ಮಂದಗತಿಯಲ್ಲಿದ್ದ ಪ್ರಕ್ರಿಯೆಯು ಮಧ್ಯಾಹ್ನವಾಗುತ್ತಿದ್ದಂತೆ ವೇಗ ಪಡೆದುಕೊಂಡಿದ್ದು, ಮತದಾರರು ಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ….

Read More
Second puc result announced

PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಹೀಗೆ ಚೆಕ್‌ ಮಾಡಿ

ಬೆಂಗಳೂರು: 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ (PUC Result) ಇಂದು ಹೊರಬಿದ್ದಿದ್ದು, ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯವಾಗಿದೆ. ಆನ್‌ಲೈನ್‌ನಲ್ಲಿ ಈಗಾಗಲೇ ಫಲಿತಾಂಶ ಲಭ್ಯವಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಸಂಜೆ 6ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ವಿವರಗಳನ್ನು ನೀಡಲಿದ್ದಾರೆ. ರಿಸಲ್ಟ್‌ ನೋಡೋದು ಹೇಗೆ? ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ…

Read More
Demand for induction stove increased in bengaluru

Bengaluru: ರಾಜಧಾನಿಯಲ್ಲಿ ಗ್ಯಾಸ್‌ ಸಂಕಷ್ಟ, ಇಂಡಕ್ಷನ್‌ ಸ್ಟವ್‌ ಹಿಂದೆ ಬಿದ್ದ ಜನ

ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರ್ಮೋಡ ಇದೀಗ ಬೆಂಗಳೂರಿನ (Bengaluru) ಅಡುಗೆ ಮನೆಗಳಿಗೂ ತಟ್ಟಿದೆ. ಜಾಗತಿಕವಾಗಿ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸಿಗುವುದು ಕಷ್ಟವಾಗಬಹುದು ಎಂಬ ಭೀತಿ ಶುರುವಾಗಿದೆ. ಈ ಕಾರಣದಿಂದಾಗಿ ರಾಜಧಾನಿಯ ಜನ ಸಾಮಾನ್ಯರು ಹಾಗೂ ಹೋಟೆಲ್ ಮಾಲೀಕರು ಅಡುಗೆ ಅನಿಲಕ್ಕೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟವ್‌ಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಸ್ಟಾರ್‌ ಹೋಟೆಲ್‌ಗಳಿಂದಲೂ ಬೇಡಿಕೆ ನಗರದಲ್ಲಿ ಇಂಡಕ್ಷನ್ ಒಲೆಗಳಿಗೆ ಹಿಂದೆಂದೂ ಇಲ್ಲದಂತಹ ಬೇಡಿಕೆ ಕಂಡುಬರುತ್ತಿದೆ. ಈ…

Read More
Siraguppa man destroy road which connects village

SIRAGUPPA: ದ್ವೇಷದಿಂದ ರಸ್ತೆ ಅಗೆದ ಭೂಪ, ರೋಗಿಯನ್ನ ಹೆಗಲ ಮೇಲೆ ಹೊತ್ತು ಸಾಗಿದ ಹಳ್ಳಿಗರು

ಸಿರಗುಪ್ಪ: ಹಳ್ಳಿಗಳಲ್ಲಿ ಜಮೀನು ವ್ಯಾಜ್ಯಗಳು ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿರುವುದಕ್ಕೆ ಸಾಕ್ಷಿಯಾದ ಭೀಕರ ಘಟನೆಯೊಂದು ಸಿರಗುಪ್ಪ (Siraguppa) ತಾಲೂಕಿನ ಬಗ್ಗೂರು ಗ್ರಾಮದಲ್ಲಿ ನಡೆದಿದೆ. ರಸ್ತೆಯನ್ನೇ ಅಗೆದ ಭೂಪ ರಸ್ತೆ ವಿಚಾರವಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ಜಮೀನು ಮಾಲೀಕನೊಬ್ಬ ಸಾರ್ವಜನಿಕರು ಓಡಾಡುವ ದಾರಿಯನ್ನೇ ಜೆಸಿಬಿ ಮೂಲಕ ಅಗೆದು ಹಾಕಿದ್ದಾನೆ. ಇದರಿಂದಾಗಿ ಗ್ರಾಮದ ಬಾಲಕಿಯೊಬ್ಬಳು ತೀವ್ರ ಅನಾರೋಗ್ಯಕ್ಕೆ ತುತ್ತಾದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬರಲು ಸಾಧ್ಯವಾಗದೆ, ಗ್ರಾಮಸ್ಥರು ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಗೆದ ರಸ್ತೆಯಲ್ಲೇ ನಡೆದು ಸಾಗಿಸಬೇಕಾದ…

Read More
BY Vijayendra requests people not to panic about fake news

BY Vijayendra: ಕಚ್ಚಾ ತೈಲ ಸಮಸ್ಯೆ ಇಲ್ಲ, ಆತಂಕ ಬೇಡ: ಬಿವೈ ವಿಜಯೇಂದ್ರ

ದಾವಣಗೆರೆ: ಪಶ್ಚಿಮ ಏಷ್ಯಾ ಸಂಘರ್ಷ  ಜಾಗತಿಕ ಕಚ್ಚಾತೈಲದ ಮೇಲೆ ಪರಿಣಾಮ ಬೀರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಸಕಾಲಿಕ ಕ್ರಮಗಳು ದೇಶದ ಜನರ ಮೇಲೆ ಹೊರೆಯಾಗದಂತೆ ಕಾಪಾಡಿದೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ದಾವಣಗೆರೆಯಲ್ಲಿಂದು ಹೇಳಿದ್ದಾರೆ. ಅಪಪ್ರಚಾರ ನಂಬಬೇಡಿ   ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂಪಾಯಿ ಇಳಿಕೆ ಮಾಡಿದ್ದಾರೆ. ಜೊತೆಗೆ ಕಚ್ಚಾತೈಲದ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ. ದೇಶದಲ್ಲಿ…

Read More
Commercial cylinders will be supplied from Tuesday says KH muniyappa

Muniyappa: ನಾಳೆಯಿಂದ ವಾಣಿಜ್ಯ ಅಡುಗೆ ಸಿಲಿಂಡರ್‌ ಸರಬರಾಜು: ಮುನಿಯಪ್ಪ

ಬೆಂಗಳೂರು: ಮಂಗಳವಾರದಿಂದ ರಾಜ್ಯದಲ್ಲಿ  ಹೋಟೆಲ್ ಗಳಿಗೆ  ಹೆಚ್ಚಿನ ವಾಣಿಜ್ಯ ಅಡುಗೆ  ಸಿಲಿಂಡರ್ ಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು  ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ (Muniyappa) ಹೇಳಿದ್ದಾರೆ. ನಾಳೆಯಿಂದ ನಿರಂತರ ಸರಬರಾಜು ಬೆಂಗಳೂರಿನಲ್ಲಿ  ಸುದ್ದಿಗಾರರೊಂದಿಗೆ ಅವರು,  ಪ್ರಸಕ್ತ  ರಾಜ್ಯದಲ್ಲಿ  ಶೇಕಡ 20ರಷ್ಟು ಮಾತ್ರ  ವಾಣಿಜ್ಯ ಅಡುಗೆ ಅನಿಲ ಸರಬರಾಜಾಗುತ್ತಿದೆ.  ಆದರೆ, ಆಸ್ಪತ್ರೆಗಳಿಗೆ ಮಾತ್ರ  ಶೇಕಡ 100ರಷ್ಟು  ಗ್ಯಾಸ್ ಸಿಲಿಂಡರ್ ಗಳ ಸರಬರಾಜು  ನಿರಂತರವಾಗಿ ನಡೆಯುತ್ತಿದೆ ಎಂದರು.  ಪ್ರಧಾನಿ ನರೇಂದ್ರ ಮೋದಿ ಹಾಗೂ ಪೆಟ್ರೋಲಿಯಂ ಸಚಿವ…

Read More