Krishna River: ಒಣಗಿದ್ದ ಕೃಷ್ಣೆಗೆ ಮಹಾರಾಷ್ಟ್ರ ಮಳೆಯ ಆಸರೆ: ಗಡಿಭಾಗದಲ್ಲಿ ಹೆಚ್ಚಿದ ಒಳಹರಿವು, ನಿಟ್ಟುಸಿರು ಬಿಟ್ಟ ಅನ್ನದಾತ!
ಚಿಕ್ಕೋಡಿ: ಕಳೆದ ಎರಡು ತಿಂಗಳಿನಿಂದ ಹನಿ ನೀರಿಲ್ಲದೆ ಸಂಪೂರ್ಣ ಕಂಗಾಲಾಗಿದ್ದ ಕೃಷ್ಣಾ ನದಿಗೆ (Krishna River) ಕೊನೆಗೂ ಹೊಸ ಕಳೆ ಬಂದಿದೆ. ನೆರೆರಾಜ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣದೇವನ ಆರ್ಭಟ ಜೋರಾಗಿರುವುದರಿಂದ ಕೃಷ್ಣಾ ನದಿಗೆ ಸದ್ಯ 15 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನದಿ ಪಾತ್ರದ ಜನರಲ್ಲಿ ಹಾಗೂ ರೈತಾಪಿ ವಲಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಜಲಕ್ಷಾಮಕ್ಕೆ ಬ್ರೇಕ್; ರೈತರಲ್ಲಿ ಚಿಗುರಿದ ಆಸೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಆಧಾರಸ್ತಂಭವಾಗಿರುವ ಕೃಷ್ಣಾ ನದಿಯು ಒಣಗಿಹೋಗಿದ್ದರಿಂದ ಇತ್ತೀಚಿನ ದಿನಗಳಲ್ಲಿ…
