TOP NEWS
Lifeline Restored Dry Krishna River Flows Again as Maharashtra Rains Bring Relief to Farmers

Krishna River: ಒಣಗಿದ್ದ ಕೃಷ್ಣೆಗೆ ಮಹಾರಾಷ್ಟ್ರ ಮಳೆಯ ಆಸರೆ: ಗಡಿಭಾಗದಲ್ಲಿ ಹೆಚ್ಚಿದ ಒಳಹರಿವು, ನಿಟ್ಟುಸಿರು ಬಿಟ್ಟ ಅನ್ನದಾತ!

ಚಿಕ್ಕೋಡಿ: ಕಳೆದ ಎರಡು ತಿಂಗಳಿನಿಂದ ಹನಿ ನೀರಿಲ್ಲದೆ ಸಂಪೂರ್ಣ ಕಂಗಾಲಾಗಿದ್ದ ಕೃಷ್ಣಾ ನದಿಗೆ (Krishna River) ಕೊನೆಗೂ ಹೊಸ ಕಳೆ ಬಂದಿದೆ. ನೆರೆರಾಜ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣದೇವನ ಆರ್ಭಟ ಜೋರಾಗಿರುವುದರಿಂದ ಕೃಷ್ಣಾ ನದಿಗೆ ಸದ್ಯ 15 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನದಿ ಪಾತ್ರದ ಜನರಲ್ಲಿ ಹಾಗೂ ರೈತಾಪಿ ವಲಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಜಲಕ್ಷಾಮಕ್ಕೆ ಬ್ರೇಕ್; ರೈತರಲ್ಲಿ ಚಿಗುರಿದ ಆಸೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಆಧಾರಸ್ತಂಭವಾಗಿರುವ ಕೃಷ್ಣಾ ನದಿಯು ಒಣಗಿಹೋಗಿದ್ದರಿಂದ ಇತ್ತೀಚಿನ ದಿನಗಳಲ್ಲಿ…

Read More
BMTCs Loud Plan Audio Ads Inside Bengaluru Buses Leave Commuters Fuming

BMTC: ಬಿಎಂಟಿಸಿ ಬಸ್‌ಗಳಲ್ಲಿ ಇನ್ಮುಂದೆ ‘ಆಡಿಯೋ ಜಾಹೀರಾತು’ ಕಿರಿಕಿರಿ? ನಿಗಮದ ಪ್ಲಾನ್‌ಗೆ ಪ್ರಯಾಣಿಕರು ಫುಲ್ ಗರಂ!

ಬೆಂಗಳೂರು: ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ನಷ್ಟದ ಸುಳಿಯಿಂದ ಹೊರಬರಲು ಇದೀಗ ವಿನೂತನ ಆದಾಯ ಮೂಲದ ಮೊರೆ ಹೋಗಿದೆ. ಬಸ್‌ಗಳ ಬಾಡಿ ಹಾಗೂ ಟಿಕೆಟ್‌ಗಳ ಹಿಂಭಾಗವನ್ನು ಕಮರ್ಷಿಯಲ್ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಿರುವ ನಿಗಮ, ಈಗ ಬಸ್ಸುಗಳ ಒಳಗಿರುವ ಸ್ಪೀಕರ್‌ಗಳ ಮೂಲಕ ಧ್ವನಿ (ಆಡಿಯೋ) ಜಾಹೀರಾತುಗಳನ್ನು ಬಿತ್ತರಿಸಲು ಯೋಜನೆ ರೂಪಿಸಿದೆ. ದೇಶದಲ್ಲೇ ಮೊದಲ ಎನ್ನಲಾದ ಈ ಪ್ರಯೋಗಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೋಟಿ ಕೋಟಿ ಕಮಾಯಿ ಮಾಡಲು ಸಾರಿಗೆ ಇಲಾಖೆ ಕಸರತ್ತು…

Read More
HD Kumaraswamy Alleges Massive SIR Irregularities in Yeshwanthpur Assembly Segment

HD Kumaraswamy: ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ SIR ಅಕ್ರಮ; ಹೆಚ್.ಡಿ.ಕುಮಾರಸ್ವಾಮಿ ಆರೋಪ

ಬೆಂಗಳೂರು: ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆ ರಾಜ್ಯ ಸರಕಾರ ಕೇಂದ್ರೀಯ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ನಡೆಸುತ್ತಿದ್ದು, ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ನೇರ ಆರೋಪ ಮಾಡಿದರು. ಸಿಎಂ ವಿರುದ್ಧ ವಾಗ್ದಾಳಿ ಅಲ್ಲದೆ, ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ದೂರಿದ ಸಚಿವರು; ಈ ಬಗ್ಗೆ ಕೇಂದ್ರ ಚುನಾವಣಾ…

Read More
Coastal Malnad Tourism Revamp Minister K.J George Announces New Policy

KJ George: ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ನೀತಿ

ಬೆಂಗಳೂರು : ಕರ್ನಾಟಕವನ್ನು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವ ‘ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ ಯನ್ನು ರೂಪಿಸಲಾಗುತ್ತಿದ್ದು, ಈ ನೀತಿಯಲ್ಲಿ ಕ್ರೂಸ್‌ ಪ್ರವಾಸೋದ್ಯಮ, ಬೀಚ್‌ ಪ್ರವಾಸೋದ್ಯಮ ಹಾಗೂ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ (KJ George) ಅಧಿಕಾರಿಗಳಿಗೆ ಸೂಚನೆ ನೀಡಿದರು . ಇಂದು ನಡೆದ ಮಹತ್ವದ ಸಭೆ ಇಂದು ಇಂಧನ…

Read More
Gruhajyoti scheme changes in July month bill

Gruhajyoti: ಗೃಹಜ್ಯೋತಿ ಲೆಕ್ಕಾಚಾರದಲ್ಲಿ ಬದಲಾವಣೆ: ಜುಲೈ ಕರೆಂಟ್ ಬಿಲ್‌ ಕಥೆ ಇದು

ಬೆಂಗಳೂರು: ರಾಜ್ಯ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ (Gruhajyoti) ಯೋಜನೆಯಲ್ಲಿ ಪ್ರಮುಖ ಮರುಪರಿಶೀಲನಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಇದು ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯ ಮೇಲೆ ನೇರ ಪರಿಣಾಮ ಬೀರಲಿದೆ. ಹೊಸ ನಿಯಮದ ಪ್ರಕಾರ, ಫಲಾನುಭವಿಗಳ ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯ ಸರಾಸರಿಯನ್ನು ಲೆಕ್ಕ ಹಾಕಿ ಜುಲೈ ತಿಂಗಳ ಉಚಿತ ಬಿಲ್ ಅನ್ನು ನಿರ್ಧರಿಸಲಾಗುತ್ತದೆ. ಅಂದರೆ, ಈ ಬಾರಿ ಕೇವಲ ಜುಲೈ ತಿಂಗಳ ಮೀಟರ್ ರೀಡಿಂಗ್ ಅಷ್ಟೇ ಅಲ್ಲದೆ, ಗ್ರಾಹಕರ ಹಿಂದಿನ ಮೂರು ತಿಂಗಳ ಬಳಕೆಯ…

Read More
No Mandatory Caste Checks BESCOM Clears Confusion Over GruhaJyoti Door-to-Door Survey

Gruhajyoti: ಗೃಹ ಜ್ಯೋತಿ ಸಮೀಕ್ಷೆ: ಜಾತಿ ವಿವರ ನೀಡುವುದು ಕಡ್ಡಾಯವಲ್ಲ; ಗ್ರಾಹಕರ ಆತಂಕಕ್ಕೆ ಬೆಸ್ಕಾಂ ಮಹತ್ವದ ಸ್ಪಷ್ಟನೆ!

ಬೆಂಗಳೂರು: ರಾಜ್ಯ ಸರ್ಕಾರದ ಜನಪ್ರಿಯ ‘ಗೃಹ ಜ್ಯೋತಿ’ (Gruhajyoti) ಯೋಜನೆಯ ಫಲಾನುಭವಿಗಳ ವಿವರ ಕಲೆಹಾಕುವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಜಾತಿ ಅಥವಾ ಪ್ರವರ್ಗದ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಜುಲೈ 1 ರಿಂದ ರಾಜ್ಯಾದ್ಯಂತ ಮನೆ ಮನೆ ಸಮೀಕ್ಷೆ ಆರಂಭವಾಗಿದ್ದು, ಸಾರ್ವಜನಿಕರಲ್ಲಿ ಮೂಡಿದ್ದ ದೊಡ್ಡ ಆತಂಕ ಮತ್ತು ಗೊಂದಲಕ್ಕೆ ಇಲಾಖೆ ಈಗ ತೆರೆ ಎಳೆದಿದೆ. ಸಾರ್ವಜನಿಕರ ಆಕ್ಷೇಪಕ್ಕೆ ಬೆಸ್ಕಾಂ ಪ್ರತಿಕ್ರಿಯೆ ಪ್ರಸ್ತುತ ಎಸ್ಕಾಂಗಳ ಸಿಬ್ಬಂದಿ ಹಾಗೂ ಮೀಟರ್…

Read More
Deadlock Over Indira Kit Government to Pause Free Ration Kit Scheme After 8 Months of Delay

Indira Kit: ಆರಂಭಕ್ಕೂ ಮುನ್ನವೇ ‘ಇಂದಿರಾ ಕಿಟ್’ ಯೋಜನೆಗೆ ಗ್ರಹಣ: ಟೆಂಡರ್ ಲಾಬಿ, ಕೋರ್ಟ್ ಭೀತಿಯಿಂದ ಬಡವರ ನಿರೀಕ್ಷೆ ಹುಸಿ!

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಬಡವರಿಗೆ ವಿತರಿಸಲು ರಾಜ್ಯ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಇಂದಿರಾ ಕಿಟ್’ (Indira Kit) ಯೋಜನೆ ಶುರುವಾಗುವ ಮುನ್ನವೇ ಮೂಲೆಗುಂಪಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆಡಳಿತಾತ್ಮಕ ಹಾಗೂ ಕಾನೂನು ತೊಡಕುಗಳಿಂದಾಗಿ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಏನಿದು ಇಂದಿರಾ ಕಿಟ್ ಯೋಜನೆ? ರಾಜ್ಯದ ಲಕ್ಷಾಂತರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪೌಷ್ಟಿಕ ಆಹಾರ ಒದಗಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿತ್ತು….

Read More