CRIME: ಪ್ರೀತಿಗೆ ಅಡ್ಡಿಯಾದ ಸ್ನೇಹಿತನ ಬರ್ಬರ ಹತ್ಯೆ, ಆರೋಪಿಗಳು ಅಂದರ್
ನಂಜನಗೂಡು: ಫೆಬ್ರವರಿಯಿಂದ ಕಾಣೆ ಆಗಿದ್ದ ನಂಜನಗೂಡಿನ (Crime) ದೇವೇರಮ್ಮನಹಳ್ಳಿ ಪಾಳ್ಯದ ಸ್ವಾಮಿ ಎನ್ನುವವರ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಸ್ನೇಹಿತರೇ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಆನಂದ.ಎಸ್ ಅವರ ನೇತೃತ್ವದಲ್ಲಿ ಈ ಪ್ರಕರಣವನ್ನ ಪೊಲೀಸರು ಬೇದಿಸುವಲ್ಲಿ ಯಶಸ್ವಿ ಆಗಿದ್ದು, ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಏನಿದು ಪ್ರಕರಣ? ದಿನಾಂಕ 04.03.2026 ರಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇವೀರಮ್ಮನಹಳ್ಳಿಪಾಳ್ಯ ಗ್ರಾಮದ ಸವಿತಾ ಎಂಬುವವರು ನಂಜನಗೂಡು ಗ್ರಾಮಾಂತರ ಪೊಲೀಸ್…
