Bengaluru: ಬಾರ್ ನಿರ್ಮಾಣಕ್ಕೆ ಅಡ್ಡಿ ಅಂತ ಆಂಜನೇಯನ ಗುಡಿಯನ್ನೇ ಕೆಡವಿದ್ರು! ರಾತ್ರೋ ರಾತ್ರಿ ದೇಗುಲ ನೆಲಸಮ
ಬೆಂಗಳೂರು (ನ.20): ಬಾರ್ ನಿರ್ಮಾಣಕ್ಕೆ (Bar Construction) ದೇವಸ್ಥಾನ ಅಡ್ಡಿಯಾಗ್ತಿದೆ ಎನ್ನುವ ಕಾರಣಕ್ಕೆ ರಾತ್ರೋ ರಾತ್ರಿ ದೇವಸ್ಥಾನವನ್ನ ಕೆಡವಿದ ಘಟನೆ ಬೆಂಗಳೂರು (Bengaluru) ಹೊರವಲಯದ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಇದ್ದ ದೇವಸ್ಥಾನ (Temple) ಬೆಳಗ್ಗೆಯಾಗೋ ವೇಳೆಗೆ ನೆಲಸಮಗೊಂಡಿದೆ. ದೇವಸ್ಥಾನ ಕೆಡವಂತಹ ಕೆಲಸ ಮಾಡಿದ್ಯಾರು? ಬಾರ್ ನಿರ್ಮಾಣಕ್ಕೆ ಅರ್ಜಿ, ಆಡಳಿತ ಮಂಡಳಿ ವಿರೋಧ ಕೆಲ ಸ್ಥಳೀಯರು ಕಳೆದ ಕೆಲ ದಿನಗಳ ಹಿಂದೆ ದೇವಸ್ಥಾನದ ಸಮೀಪದಲ್ಲೇ ಬಾರ್ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಹೀಗಾಗಿ ಅಬಕಾರಿ ಇಲಾಖೆಗೆ…
Elephant Rescue Operation: ಕೆನಾಲ್ಗೆ ಬಿದ್ದು 3 ರಾತ್ರಿ ಕಳೆದ ಗಜರಾಜ; ಅಂತೂ ಶುರುವಾಯ್ತು ಕಾಡಾನೆ ಮೇಲೆತ್ತುವ ಕಾರ್ಯ
ಆನೆ ಮೇಲೆತ್ತುವ ಕಾರ್ಯಾಚರಣೆ ಶುರುವಾಗಿದ್ದು, ಪಶು ವೈದ್ಯರಾದ ಡಾ ರಮೇಶ್, ಮತ್ತು ಡಾ ಆದರ್ಶ್ ರಿಂದ ಆನೆಗೆ ಅರವಳಿಕೆ ಮದ್ದು ನೀಡಲಾಗಿದೆ. ಆನೆಯನ್ನು ರಕ್ಷಣೆ ಮಾಡಲು ಕೆನಾಲ್ಗೆ ಸಿಬ್ಬಂದಿಗಳು ಕಂಟೇನರ್ ಇಳಿಸಿದ್ದಾರೆ. ಮಂಡ್ಯ (ನ.18): ಶಿವನಸಮುದ್ರ ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್ ಕಾಡಾನೆ ಬಿದ್ದಿದ್ದು, ಆನೆಯನ್ನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೆನಾಲ್ನಿಂದ ಆನೆಯನ್ನು ಮೇಲೆತ್ತಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ವೈದ್ಯರು ಆನೆಗೆ ಅರವಳಿಕೆ ಮದ್ದು ನೀಡಿದ ಕಾಲುವೆಯಲ್ಲಿರೋ ಆನೆಗೆ ಅರವಳಿಕೆ…
WPL 2026: 2 ನಗರಗಳಲ್ಲಿ ನಡೆಯಲಿದೆ ವುಮೆನ್ಸ್ ಪ್ರೀಮಿಯರ್ ಲೀಗ್
Women’s Premier League 2026: ವುಮೆನ್ಸ್ ಪ್ರೀಮಿಯರ್ ಲೀಗ್ನ ಚೊಚ್ಚಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ದ್ವಿತೀಯ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದರು. ಏಕೆಂದರೆ 2026ರ ಟಿ20 ವಿಶ್ವಕಪ್ಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯವಹಿಸಲಿದೆ. ಈ ಟೂರ್ನಿಯು ಫೆಬ್ರವರಿ 7 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ ಅನ್ನು ಆಯೋಜಿಸಲು ಭಾರತೀಯ ಕ್ರಿಕೆಟ್…
Important: ಮೊಬೈಲ್ ಕಳೆದುಕೊಂಡ ತಕ್ಷಣ ಈ ಕ್ರಮ ಅನುಸರಿಸಿ, ಪೊಲೀಸ್ ಸ್ಟೇಷನ್ ಗೆ ಹೋಗದೇ ವಸ್ತು ವಾಪಾಸ್ ಸಿಗುತ್ತೆ!
ಬೆಂಗಳೂರು: ಒಂದು ವೇಳೆ ನಾಳೆ ನಿಮ್ಮ ಮೊಬೈಲ್ (Mobile) ಬಸ್ಸಲ್ಲೋ, ಸಂತೆಯಲ್ಲೋ, ಜಾತ್ರೆಯಲ್ಲೋ ಮತ್ತೆಲ್ಲೋ ಕಳೀತು ಅನ್ಕೊಳಿ ಆಗ ನೀವು ಮಾಡೋ ಮೊದಲು ಕೆಲ್ಸ (Work) ಏನು? ಪೊಲೀಸ್ ಸ್ಟೇಶನ್ ಗೆ ಹೋಗೋದಾ? ಹಾಗಾದರೆ ಈ ತಂತ್ರಾಂಶದ (Website) ಬಗ್ಗೆ ನೀವು ತಿಳಿದುಕೊಳ್ಳಲೇಬೇಕು! ಹೌದಾ? ಯಾವ್ದು ಆ ತಂತ್ರಾಂಶ? ಅದರಿಂದ ಏನು ಉಪಯೋಗ? ಅಂತೀರಾ? ಇಲ್ಲಿದೆ ಕಂಪ್ಲೀಟ್ ಡಿಟೈಲ್ ನಿಮ್ಮ ಮೊಬೈಲ್ ಕಳೆದು ಹೋದಾಗ ಮಾಡಬೇಕಾದದ್ದು ಇದು ನಿಮ್ಮ ಮೊಬೈಲ್ ಕಳೆದು ಹೋದಾಗ ನಿಮ್ಮ ಜೊತೆಗಿದ್ದವರ ಮೊಬೈಲ್ ಅಥವಾ ಸೈಬರ್ ಸೆಂಟರ್ ಗೆ ಹೋಗಿ ಮೊದಲು ಈ ತಂತ್ರಾಂಶದ ಸರ್ಚ್ ಮಾಡಿ. ಇದು ಕರ್ನಾಟಕ ಪೊಲೀಸ್ ಇಲಾಖೆ ಅಧಿಕೃತವಾಗಿ ಹ್ಯಾಂಡಲ್ ಮಾಡುವ app ಇದರ ಹೆಸರು ಕೆ ಎಸ್ ಪಿ ಎಂದು, ಇದರಲ್ಲಿ ಹಲವು ಆಯ್ಕೆಗಳಿವೆ. ಅದರಲ್ಲೂ ಮುಖ್ಯವಾಗಿ ಎಮರ್ಜೆನ್ಸಿ ಹಾಗೂ ನಾನ್-ಎಮರ್ಜೆನ್ಸಿ ವಿಭಾಗ ಇದೆಯಲ್ಲಾ ಅದರಲ್ಲಿ ನಾನ್-ಎಮರ್ಜನ್ಸಿ ಭಾಗಕ್ಕೆ…
Sheik Haseena: ಅಂದು ಧಗ ಧಗ ಹೊತ್ತಿ ಉರಿದಿದ್ದ ಇಡೀ ಬಾಂಗ್ಲಾದೇಶ! ಶೇಖ್ ಹಸೀನಾ ಮಾಡಿದ್ದ ಸಾಲು ಸಾಲು ತಪ್ಪುಗಳೇನು?
ಢಾಕಾ: 15 ವರ್ಷ ಕಾಲ ಸುದೀರ್ಘವಾಗಿ ಬಾಂಗ್ಲಾದೇಶದ ಪ್ರಧಾನಿಯಾಗಿ (Bangladesh Prime Minister) ಆಡಳಿತ ನಡೆಸಿದ್ದ ಶೇಖ್ ಹಸೀನಾಗೆ (Sheik Haseena)ಮರಣದಂಡನೆ ವಿಧಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ನಡೆದ ಹಿಂಸಾಚಾರ ಸಂಬಂಧಿಸಿದಂತೆ ಮಾನವೀಯತೆಯ ವಿರುದ್ಧದ (Crimes against Humanity)) ಅಪರಾಧ ಅಡಿಯಲ್ಲಿ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ (Death Sentence) ವಿಧಿಸಲಾಗಿದೆ. ಶೇಖ್ ಹಸೀನಾ ಮಾಡಿದ್ದ ತಪ್ಪುಗಳೇನು? ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾದೇಶದ ಇತಿಹಾಸದಲ್ಲೇ ಎಂದೂ ಕಂಡು ಕೇಳಿರದ ದೊಡ್ಡ ಹಿಂಸಾಚಾರ ನಡೆದಿತ್ತು. ಜುಲೈ ತಿಂಗಳ ಆರಂಭದಲ್ಲಿ ವಿದ್ಯಾರ್ಥಿಗಳು…
Shubman Gill: ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುತ್ತಿಗೆಗೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಾರತ (India)ss ತಂಡದ ನಾಯಕ ಶುಭಮನ್ ಗಿಲ್ (Shubman Gill) ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈಡನ್ ಗಾರ್ಡನ್ಸ್ (Eden Gardens) ಮೈದಾನದಲ್ಲಿ ಭಾರತ ತಂಡ 30 ರನ್ಗಳ ಸೋಲು ಅನುಭವಿಸಿತ್ತು. ಇದರೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆ ಕಂಡಿದೆ. ಕೋಲ್ಕತ್ತಾ ಟೆಸ್ಟ್ ಪಂದ್ಯದ ಬಳಿಕ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್ ಗಂಗೂಲಿ (Sourav…
Online Scam: ಐಟಿ ಉದ್ಯೋಗಿಗೆ ಬರೋಬ್ಬರಿ ₹310000000 ವಂಚನೆ: ಬೆಚ್ಚಿ ಬೀಳುವಂತಿದೆ ಸೈಬರ್ ಕ್ರಿಮಿಗಳ ಪ್ಲಾನ್!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ನಡೆದಿದೆ. ಇಂದಿರಾನಗರ ನಿವಾಸಿಯೊಬ್ಬರಾದ ಐಟಿ ಕ್ಷೇತ್ರದ ಹಿರಿಯ ಉದ್ಯೋಗಿ ಮಹಿಳೆಗೆ ಸೈಬರ್ ವಂಚಕರು ಬರೋಬ್ಬರಿ 31 ಕೋಟಿ ರೂಪಾಯಿ ವಂಚಿಸಿದ್ದಾರೆ. 180ಕ್ಕೂ ಹೆಚ್ಚು ಬ್ಯಾಂಕ್ ಟ್ರಾನ್ಸ್ಆಕ್ಷನ್ಗಳ ಮೂಲಕ ನಡೆದ ಈ ಲೂಟಿ ಬಗ್ಗೆ ಪೂರ್ವ ವಿಭಾಗ ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (ಸೆನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರ್ ಖದೀಮರು ಬರೋಬ್ಬರಿ ₹31ಕೋಟಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪೂರ್ವ ವಿಭಾಗ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸೈಬರ್ ಮೋಸದ…
Chanakya Niti: ಹೆಂಡ್ತಿಯರು ಬಾಯಿತಪ್ಪಿಯೂ ಗಂಡನ ಬಳಿ ಈ 5 ವಿಚಾರಗಳನ್ನು ಹಂಚಿಕೊಳ್ಳಬಾರದಂತೆ; ಸಂಸಾರ ಮುರಿದು ಬೀಳುತ್ತೆ!
ಚಾಣಕ್ಯ ನೀತಿಶಾಸ್ತ್ರದಲ್ಲಿ ಕುಟುಂಬ, ಸಂಬಂಧ, ಮೌನ, ಪ್ರಾಮಾಣಿಕತೆ, ಹೋಲಿಕೆ, ಹಣಕಾಸು ಮತ್ತು ಕೋಪದ ಬಗ್ಗೆ ಅಮೂಲ್ಯ ತತ್ವಗಳನ್ನು ನೀಡಲಾಗಿದೆ. ಜೊತೆಗೆ ಗಂಡ-ಹೆಂಡತಿ ಸಂಬಂಧ ಬಲವಾಗಿರಲು ಈ ಟಿಪ್ಸ್ ಫಾಲೋ ಮಾಡುವುದು ಮುಖ್ಯ ಎಂದು ತಿಳಿಸಲಾಗಿದೆ.
Karnataka Congress: ಕೆಪಿಸಿಸಿ ಸ್ಥಾನಕ್ಕೆ ಡಿಕೆಶಿ ಬಿಗ್ ಫೈಟ್! ಹಠ ಹಿಡಿದ ‘ಸಾಹುಕಾರ’ ಕಥೆಯೇನು?
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ(State Politics) ಮತ್ತೆ ಕುರ್ಚಿ ಫೈಟ್ ಮುಂದಡಿ ಇಟ್ಟಂತಾಗಿದೆ. ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನಕ್ಕೆ ಬಿರುಕು ಬಿಟ್ಟಿರುವ ಚರ್ಚೆಗಳು ಮತ್ತೆ ಗರಿಗೆದರಿರುವಾಗ, ಡಿಕೆ ಶಿವಕುಮಾರ (Dk Shivakumar) ನೀಡಿದ ಒಂದು ಹೇಳಿಕೆ ಕಾಂಗ್ರೆಸ್ನ ತುಂಬಿದ ಮನೆಯೊಳಗೆ ಒಳಬೇಗುದಿ ಸೃಷ್ಟಿಸಿದೆ. ಒಂದೆಡೆ ಸಂಪುಟ ಸರ್ಜರಿ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಯಲೂ ಅಸ್ತು ಎಂದಿದೆ. ಈ ನಡುವೆ ಡಿಕೆ ಬಳಿ ಎರಡೂ ಭಾರೀ ಖಾತೆಗಳಿದ್ದು, ಅದರ ನಡುವೆ ಕೆಪಿಸಿಸಿ ಅಧ್ಯಕ್ಷಸ್ಥಾನ ನಿರ್ವಹಿಸುವುದು, ಹೊರೆಯಾಗುತ್ತದೆ, ಬೇರೆಯವರಿಗೂ ಅವಕಾಶ…
Bus Accident: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಸಂಕಷ್ಟ, ಗಂಭೀರ ಗಾಯ
ಧರ್ಮಸ್ಥಳಕ್ಕೆ (Dharmasthala) ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ (KSRTC Bus) ಮಾರ್ಗ ಮಧ್ಯೆಯೇ ಪಲ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮೂರ್ಕಿ ಕ್ರಾಸ್ ಬಳಿ ಅಪಘಾತ (Accident) ಸಂಭವಿಸಿದೆ. ಬಾದಾಮಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಬಸ್ ಪಲ್ಟಿಯಾಗಿ ಬಸ್ನಲ್ಲಿದ್ದ ಸುಮಾರು 29 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
