Chaluvaraya Swamy: ಮೈತ್ರಿ ಬಿಟ್ಟು ಏಕಾಂಗಿಯಾಗಿ 120 ಸ್ಥಾನ ಗೆದ್ದು ತೋರಿಸಿ: ಎಚ್ಡಿ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಮುಖಾಮುಖಿ ಸವಾಲು!
ಬೆಂಗಳೂರು: “ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಧೈರ್ಯವಿದ್ದರೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಹೊರಬರಲಿ” ಎಂದು ಮಾಜಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಬಹಿರಂಗ ಪಂಥಾಹ್ವಾನ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮೈತ್ರಿ ಇಲ್ಲದೆ ಒಂಟಿಯಾಗಿ ಸ್ಪರ್ಧಿಸಿ, ವಿಧಾನಸೌಧದ ಎದುರು ನಿಂತು 120 ಸೀಟುಗಳನ್ನು ಗೆಲ್ಲುವುದಾಗಿ ಘೋಷಿಸಲಿ ಮತ್ತು ಅದನ್ನು ಸಾಧಿಸಿ ತೋರಿಸಲಿ ಎಂದು ಸವಾಲು ಹಾಕಿದರು. ನಾನು ಕುಮಾರಸ್ವಾಮಿಗೆ ಶರಣಾಗುವೆ ಒಂದು ವೇಳೆ ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಹೋರಾಡಿ…
