War: ಮಧ್ಯ ಪ್ರಾಚ್ಯ ಸಂಘರ್ಷ, ಕೇಂದ್ರ ಜಲ ಸಾರಿಗೆ ಸಚಿವರ ಸಭೆ
ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷದ (War) ಹಿನ್ನೆಲೆಯಲ್ಲಿ ಸಾಗರಯಾನ ಹಾಗೂ ವ್ಯಾಪಾರ ವಹಿವಾಟುಗಳನ್ನು ನಿರ್ವಿಘ್ನವಾಗಿ ನಡೆಸಲು ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಕೇಂದ್ರ ಬಂದರು ಮತ್ತು ಜಲ ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ಬಂದರು ಮತ್ತು ಸಮುದ್ರ ಯಾನದ ಬಾಧ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಜಾಗತಿಕ ಸರಬರಾಜನ್ನು ಸಕ್ರಿಯವಾಗಿ ಕಾಯ್ದುಕೊಳ್ಳಲು ಅನುಸರಿಸಬೇಕಾದ ಪ್ರಮಾಣಿತ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸರಕು ಸಾಗಾಣಿಕೆದಾರರು, ಬಂದರುಗಳ ನಿರ್ವಾಹಣೆಗಾರರು ಮತ್ತು ವ್ಯಾಪಾರ…
